ಹಾಸನ: ಅಪಘಾತವಾಗಿ ಕಾಲು ಮುರಿದ ನವಿಲಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ್ರು

Public TV
0 Min Read

ಹಾಸನ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ರಾಷ್ಟ್ರೀಯ ಪಕ್ಷಿ ನವಿಲಿಗೆ ಸಾರ್ವಜನಿಕರು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಬಳಿ ನವಿಲು ಆಹಾರಕ್ಕಾಗಿ ರಸ್ತೆಯ ಬಳಿ ಓಡಾಡುತಿತ್ತು. ಈ ಸಂದರ್ಭದಲ್ಲಿ ಅಪರಿಚಿತ ವಾಹನವೊಂದು ನವಿಲಿಗೆ ಡಿಕ್ಕಿ ಹೊಡೆದು ಪಾರಾರಿಯಾಗಿದೆ. ಪರಿಣಾಮ ಕಾಲು ಮುರಿತಕ್ಕೊಳಾಗಾದ ನವಿಲು ನೆಡಯಲು ಆಗದೇ ಪರಿತಪಿಸುತ್ತಿತ್ತು.

ಇದನ್ನು ಗಮನಿಸಿದ ಗ್ರಾಮಸ್ಥರು ನವಿಲನ್ನು ಹಿಡಿದು ತಕ್ಷಣ ಸ್ಥಳೀಯ ಪಶು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಬಳಿಕ ಸಕಲೇಶಪುರ ಅರಣ್ಯ ಇಲಾಖೆಗೆ ನವಿಲನ್ನು ಓಪ್ಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *