BBK 11: ಮಂಜು ನಂಬಿಕೆಗೆ ಅರ್ಹರಲ್ಲ: ವೈಲ್ಡ್ ಕಾರ್ಡ್ ಸ್ಪರ್ಧಿ ಶೋಭಾ ಶೆಟ್ಟಿ ಕಿಡಿ

Public TV
2 Min Read

‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ 50ನೇ ದಿನಕ್ಕೆ ಕಾಲಿಟ್ಟಿದೆ. ಅನುಷಾ ರೈ (Anusha Rai) ದೊಡ್ಮನೆ ಆಟದಿಂದ ಎಲಿಮಿನೇಷನ್ ಆಗುತ್ತಿದ್ದಂತೆ ಡಬಲ್ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಗೆ ಮನೆ ಶೇಕ್ ಆಗಿದೆ. ದೊಡ್ಮನೆಯ ಪ್ರಬಲ ಸ್ಪರ್ಧಿಗಳನ್ನೇ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಟಾರ್ಗೆಟ್ ಮಾಡಿದ್ದಾರೆ.

ವಾಹಿನಿಯು ರಿಲೀಸ್ ಮಾಡಿರುವ ಹೊಸ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯೊಳಗೆ ಶೋಭಾ ಶೆಟ್ಟಿ ಮತ್ತು ರಜತ್ ಆಗಮಿಸಿದ್ದಾರೆ. ಇವರಿಬ್ಬರ ಎಂಟ್ರಿ ಕಂಡು ಮನೆಯವರು ಕೊಂಚ ಶಾಕ್ ಆಗಿರುವುದಂತೂ ನಿಜ. ಮನೆಯೊಳಗೆ ಬರುತ್ತಿದ್ದಂತೆಯೇ ಅವರಿಬ್ಬರಿಗೂ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಅದೇನೆಂದರೆ, ಈಗಾಗಲೇ ಒಳಗಿರುವ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ತಿಳಿಸುತ್ತಾ, ಒಂದೊಂದು ತೆಂಗಿನಕಾಯಿಯನ್ನು ಒಡೆದು ಹಾಕಬೇಕು.

ಈ ವೇಳೆ, ನೀವು ಸ್ಟಾರ್ಟಿಂಗ್‌ನಿಂದ ಕಿತ್ತು ದಬಾಕಾದೇ ಇರೋದನ್ನು ನಾನು ವೈಲ್ಡ್ ಕಾರ್ಡ್ ಎಂಟ್ರಿಯಿಂದ ಕಿತ್ತು ದಬಾಕ್ತಿನಿ ಎಂದು ರಜತ್ ಅವರು ಸಖತ್ ಅಟಿಟ್ಯೂಡ್‌ನಲ್ಲಿ ಹೇಳುತ್ತಾ ತೆಂಗಿನಕಾಯಿ ಒಡೆದು ಹಾಕಿದ್ದಾರೆ.

ಶೋಭಾ ಶೆಟ್ಟಿ ಅವರು, ಉಗ್ರಂ ಮಂಜು (Urgam Manju) ಸ್ನೇಹಕ್ಕೆ ನಂಬಲರ್ಹವಲ್ಲದ ವ್ಯಕ್ತಿ. ಅವರು ಬಗ್ಗೆ ಇವರು ಮಾತಾಡ್ತಾರೆ, ಇವರ ಬಗ್ಗೆ ಅವರು ಮಾತಾಡ್ತಾರೆ ಅತ್ತ ಗೌತಮಿ ಅವರು ಮುಖವಾಡವನ್ನು ಇನ್ನೂ ಹಾಕಿಕೊಂಡಿದ್ದಾರೆ. ಆ ಒಂದು ಮುಖವಾಡವನ್ನು ನಾನು ಬಯಲು ಮಾಡಬಹುದು ಎಂದು ಹೇಳಿದ್ದಾರೆ. ಹೀಗೆ ಗೌತಮಿ ಹೆಸರು ಹೇಳಿ ಶೋಭಾ ತೆಂಗಿನಕಾಯಿ ಒಡೆದರು. ಆದರೆ ಅದು ಒಡೆಯಲಿಲ್ಲ. ಆಗ ಗೌತಮಿಗೆ ನಗುವನ್ನು ತಡೆಯಲಾಗಲಿಲ್ಲ.

ಅಂದಹಾಗೆ, ಕನ್ನಡತಿ ಶೋಭಾ ಶೆಟ್ಟಿ ಅವರು ಕಳೆದ ತೆಲುಗಿನ ‘ಬಿಗ್ ಬಾಸ್ 7’ಕ್ಕೆ ಸ್ಪರ್ಧಿಯಾಗಿ ಆಟ ಆಡಿ ಪ್ರೇಕ್ಷಕರ ಗಮನ ಸೆಳದಿದ್ದರು. ಅಗ್ನಿಸಾಕ್ಷಿ, ನಮ್ಮ ರುಕ್ಕು ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

ಇನ್ನೂ 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ರಜತ್ ಬುಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

Share This Article