ಅಥಣಿ ತಾಲೂಕಿನ ರೈತರಿಗೂ ಶಾಕ್ – 7 ಎಕ್ರೆ ಜಾಗ ತನ್ನದು ಎಂದ ವಕ್ಫ್‌ ಬೋರ್ಡ್‌

Public TV
1 Min Read

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯ ಚಿಕ್ಕೋಡಿ (Chikkodi) ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ಅಥಣಿ (Athani) ತಾಲೂಕಿನ ರೈತರಿಗೂ ವಕ್ಪ್ ಬೋರ್ಡ್‌ (Waqf Board) ಶಾಕ್ ನೀಡಿದೆ.

ಶಿರಹಟ್ಟಿ ಗ್ರಾಮದ ರೈತ (Farmers) ಬಸವರಾಜ ಅಡಿವೆಪ್ಪ ಕೊಹಳ್ಳಿ ಅವರ ಪಹಣಿ ಪತ್ರದಲ್ಲಿ ವಕ್ಪ್ ಆಸ್ತಿ ನಮೂದಾಗಿದೆ‌. ಇದನ್ನೂ ಓದಿ: Waqf Land Row | ವಿಜಯಪುರದ 43 ಪ್ರವಾಸಿ ತಾಣಗಳಿಗೆ ವಕ್ಫ್‌ ನೋಟಿಸ್‌

7 ಎಕರೆ 31 ಗುಂಟೆ ಜಮೀನು ಹೊಂದಿರುವ ಬಸವರಾಜ ಹಾಗೂ ಅವರ ಅಣ್ಣತಮ್ಮಂದಿರ ಹೆಸರಿನಲ್ಲಿರುವ ಪಹಣಿ ಪತ್ರದಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗಿದೆ.

ವಕ್ಫ ಆಸ್ತಿ ನಮೂದಾದ ಹಿನ್ನೆಲೆಯಲ್ಲಿ ರೈತನ ಕುಟುಂಬದಲ್ಲಿ ಆತಂಕ ಎದುರಾಗಿದೆ. ತಕ್ಷಣ ಸರ್ಕಾರ ಪಹಣಿಯಲ್ಲಿ ನಮೂದಾಗಿರುವ ವಕ್ಫ ಆಸ್ತಿಯನ್ನು ತೆಗೆದು ಹಾಕುವಂತೆ ರೈತರ ಆಗ್ರಹಿಸಿದ್ದಾರೆ.

Share This Article