ಬ್ಯಾಂಕಾಕ್‌ನಲ್ಲಿ ಘೋರ ದುರಂತ – ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವ ದಹನ

Public TV
1 Min Read

ಬ್ಯಾಂಕಾಕ್‌: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಘೋರ ದುರಂತ ನಡೆದಿದೆ. ಶಾಲಾ ಬಸ್ಸೊಂದರಲ್ಲಿ ಅಗ್ನಿ ಆಕಸ್ಮಿಕ (School Bus fire) ಸಂಭವಿಸಿದೆ. ಕನಿಷ್ಠ 25 ಮಕ್ಕಳು, ಮೂವರು ಶಿಕ್ಷಕರು ಸಜೀವವಾಗಿ ದಹನವಾಗಿದ್ದಾರೆ. 16 ಮಕ್ಕಳು, ಮೂವರು ಶಿಕ್ಷಕರನ್ನು (Teachers) ರಕ್ಷಿಸಲಾಗಿದೆ.

ಪ್ರವಾಸಕ್ಕೆ ತರಳಿದ್ದ ಶಾಲಾ ಬಸ್‌ ವಾಪಸ್‌ಗೆ ಥೈಲ್ಯಾಂಡ್‌ಗೆ (Thailand) ಮರಳುತ್ತಿದ್ದಾಗ ಮುಂಭಾಗ ಟೈರ್‌ ಸ್ಫೋಟಗೊಂಡ ನಂತರ ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿಖರ ಕಾರಣ ಇನ್ನೂ ತಿಳಿದುಬಂದಿದೆ. ಬ್ಯಾಂಕಾಕ್‌ನ ಉತ್ತರಕ್ಕೆ 100 ಕಿಮೀ ದೂರದಲ್ಲಿ ಘಟನೆ ನಡೆದಿದ್ದು, ಥಾಯ್ಲೆಂಡ್ ಪ್ರಧಾನಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಅಂತಿಮ ಹಂತದ ಚುನಾವಣೆ ಸಂಪನ್ನ – ಶೇ.65ಕ್ಕೂ ಹೆಚ್ಚು ಮತದಾನ

ಘಟನೆ ಬಳಿಕ ಬಾನೆತ್ತರಕ್ಕೆ ಬಿಂಕಿಯ ಕಿಡಿ ಹಾಗೂ ದಟ್ಟ ಹೊಗೆ ಆವರಿಸಿದೆ. ಈ ಕುರಿತ ವೀಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿಯೂ ಸದ್ದು ಮಾಡುತ್ತಿವೆ. ಘಟನೆಯಲ್ಲಿ ಬದುಕುಳಿದ 16 ಮಕ್ಕಳು, ಮೂವರು ಶಿಕ್ಷಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

ಈವರೆಗೆ ಹೊರತೆಗೆಯಲಾಗಿರುವ 23 ಶವಗಳಲ್ಲಿ 11 ಗಂಡು, 7 ಗಂಡು, 7 ಮಹಿಳೆಯರ ಶವಗಳಿವೆ. ಐವರ ಗುರುತು ಪತ್ತೆಯಾಗದಷ್ಟು ಬೆಂದು ಸುಟ್ಟು ಕರಕಲಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಜಯಂತಿ ಪ್ರಯುಕ್ತ ಚಿಕ್ಕಬಳ್ಳಾಪುರದಲ್ಲಿ ಗಾಂಧಿ ಭವನ ಲೋಕಾರ್ಪಣೆಗೆ ಸಕಲ ಸಿದ್ಧತೆ

Share This Article