ನಾಗಮಂಗಲದ ಘಟನೆ ಕಿಡಿಗೇಡಿಗಳ ಕೆಲಸ, ಹೆಚ್‌ಡಿಕೆ ಕಡ್ಡಿ ಗೀರುವುದು ಬೇಡ: ಬಾಲಕೃಷ್ಣ

By
1 Min Read

ಬೆಂಗಳೂರು: ಎಲ್ಲಾ ಧರ್ಮದಲ್ಲೂ ಕಿಡಿಗೇಡಿಗಳು ಇದ್ದಾರೆ. ನಾಗಮಂಗಲದ ಘಟನೆಗೆ (Nagamangala Violence) ಅಂತಹ ಕಿಡಿಗೇಡಿಗಳೇ ಕಾರಣ ಎಂದು ಮಾಗಡಿ ಶಾಸಕ ಬಾಲಕೃಷ್ಣ (H.C Balakrishna) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಮಂಗಲದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಒಂದು ಧರ್ಮದ ಕೆಲಸ ಆಗುವಾಗ ಇನ್ನೊಂದು ಧರ್ಮದವರು ಅಡ್ಡಿಪಡಿಸುವುದು ಸರಿಯಲ್ಲ. ಕಿಡಿಗೇಡಿಗಳಿಂದ ಧರ್ಮ ಧರ್ಮದ ನಡುವೆ ಗದ್ದಲ ಆಗುತ್ತದೆ. ದ್ವೇಷ ಭಾವನೆ ಬಿತ್ತದ ರೀತಿ ನಾವೆಲ್ಲ ಇರಬೇಕು. ತಪ್ಪು ಯಾರೇ ಮಾಡಿದರೂ ಕೂಡ ಶಿಕ್ಷೆ ಆಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದುರುಳರು ಯಾವುದೇ ಧರ್ಮದವರಾಗಿರಲಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಿಎಂ

ಯಾವ ಧರ್ಮದವರು ತಪ್ಪು ಮಾಡಿದರೂ ಕೂಡ ತಪ್ಪೇ. ಇಂಥಹ ಘಟನೆ ಆಗಬಾರದಿತ್ತು, ಆಗಿದ್ದು ವಿಷಾದಕರ, ನಾವ್ಯಾರು ಇಂಥಹ ಘಟನೆ ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ (H.D Kumaraswamy)ಬಿಜೆಪಿ ಜೊತೆಗೆ ಸೇರಿಕೊಂಡಿದ್ದಾರೆ. ಈಗ ಅವರು ಬೆಂಕಿ ಹೊತ್ತಿಕೊಂಡ ಶೆಡ್‌ನಲ್ಲಿ ಕಡ್ಡಿ ಗೀರುವುದು ಬೇಡ. ಹಿಂದೆ ಇದೇ ಕುಮಾರಸ್ವಾಮಿ ಮುಸ್ಲೀಮರನ್ನು ಓಲೈಸಿರಲಿಲ್ವಾ? ಅವರು ಮಾಜಿ ಸಿಎಂ ಆದವರು ಗೌರವಯುತ ಹೇಳಿಕೆ ಕೊಡಲಿ. ಇಂಥಹ ಸಂದರ್ಭದಲ್ಲಿ ಪ್ರಚೋದನಾತ್ಮಕ ಹೇಳಿಕೆ ಕೊಡುವುದು ಒಳ್ಳೆಯದಲ್ಲ. ಗೌರವಯುತವಾಗಿ ಮಾತನಾಡಲಿ. ಇಲ್ಲಿ ಬೇಳೆ ಬೆಯಿಸಿಕೊಳ್ಳೋದು ಬೇಡ ಎಂದು ಕುಟುಕಿದ್ದಾರೆ.

ಬಿಜೆಪಿಯವರು ಇಂಥಹ ಘಟನೆ ಆಗಲಿ ಎಂದು ಕಾಯ್ತಾ ಇದ್ದಾರೆ. ಎಲ್ಲದಕ್ಕೂ ಸರ್ಕಾರವೇ ಕಾರಣ ಎನ್ನುತ್ತಾರೆ. ಸರ್ಕಾರದ ಒಳ್ಳೆಯ ಕೆಲಸಗಳು ಅವರಿಗೆ ಕಾಣೋದಿಲ್ಲ. ಎಲ್ಲದಕ್ಕೂ ಸರ್ಕಾರವೇ ಹೊಣೆ ಹೊರುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನಮಾಜ್ ವೇಳೆ ಎಲ್ಲಾ ಮಂದಿರಗಳ ಮೈಕ್ ಬಂದ್ ಆಗ್ಬೇಕು – ಬಾಂಗ್ಲಾ ಸರ್ಕಾರ ಆದೇಶ

Share This Article