ಬಿಜೆಪಿ ಕೊಟ್ಟಿದ್ದ ಜಾಹೀರಾತೇ ಈಗ ಕಾಂಗ್ರೆಸ್ ಪಾಲಿಗೆ ಅಸ್ತ್ರ!

Public TV
1 Min Read

ಮೈಸೂರು: ಬಿಜೆಪಿ (BJP) ನೀಡಿದ್ದ ಜಾಹೀರಾತನ್ನು ಈಗ ಕಾಂಗ್ರೆಸ್ (Congress) ಅಸ್ತ್ರ ಮಾಡಿಕೊಂಡು ದೊಸ್ತಿ ವಿರುದ್ಧ ಠಕ್ಕರ್‌ ನೀಡುತ್ತಿದೆ.

ಇಂದು ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಬಿಜೆಪಿ ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ (HD Devegowda) ಕುಟುಂಬದ ವಿರುದ್ದ ನೀಡಿದ್ದ ಜಾಹೀರಾತನ್ನು (Advertisement) ಅಸ್ತ್ರವಾಗಿ ಬಳಸಿದೆ.

 

ದೇವೇಗೌಡರ ಕುಟುಂಬ ಮುಡಾ ಸೈಟ್ ಗಳ ಪಡೆದ ಬಗ್ಗೆ ಈ ಹಿಂದೆ ಬಿಜೆಪಿ ನೀಡಿದ್ದ ಜಾಹೀರಾತನ್ನು ಕಾಂಗ್ರೆಸ್ ಬಳಸಿಕೊಂಡಿದೆ. ನಗರದ ಹಲವು  ಸರ್ಕಲ್‌ನಲ್ಲಿ ಫ್ಲೆಕ್ಸ್‌ ಅಳವಡಿಕೆ ಮಾಡಲಾಗಿದೆ. ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತೇ ಈಗ ಕಾಂಗ್ರೆಸ್ ಬ್ರಹ್ಮಾಸ್ತ್ರವಾಗಿದೆ.

ಮಹಾರಾಜ ಮೈದಾನದಲ್ಲಿ 11 ಗಂಟೆಗೆ ಜನಾಂದೋಲನ ಸಮಾವೇಶ ನಡೆಯಲಿದೆ. ಸುಮಾರು 1 ಲಕ್ಷಕ್ಕೂ ಹೆಚ್ಚು ಕಾಂಗ್ರೆಸ್‌ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

Share This Article