ಹೊಗೆನಕಲ್‌ನಲ್ಲಿ ಬೋಟಿಂಗ್ ಸ್ಥಗಿತ – ಪ್ರವಾಸಿಗರಿಗೆ ನಿರ್ಬಂಧ

Public TV
1 Min Read

ಚಾಮರಾಜನಗರ: ಕೆಆರ್‌ಎಸ್‌ನಿಂದ (KRS) ಒಂದೂವರೆ ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಿದ್ದರಿಂದ ಚಾಮರಾಜನಗರ ಜಿಲ್ಲೆಯ ಕರ್ನಾಟಕ ತಮಿಳುನಾಡು ಗಡಿ ಹೊಗೆನಕಲ್‌ನಲ್ಲಿ (Hogenakkal) ಕಾವೇರಿ (Cauvery River) ಮೈದುಂಬಿ ಹರಿಯುತ್ತಿದ್ದಾಳೆ. ಇದನ್ನೂ ಓದಿ: ಮೆಟ್ಟೂರು ಡ್ಯಾಂ ಭರ್ತಿ, ನೀರು ಬಿಡುವಂತೆ ಸೂಚನೆ – ಕರ್ನಾಟಕದಿಂದ ತಮಿಳುನಾಡಿಗೆ ಎಷ್ಟು ನೀರು ಹೋಗಿದೆ?

ಹೊಗೆನಕಲ್ ಮೂಲಕ ಕಾವೇರಿ ನೀರು ಮೆಟ್ಟೂರು ಡ್ಯಾಂ ಸೇರುತ್ತಿದ್ದಾಳೆ. ನೀರಿನ ರಭಸಕ್ಕೆ ಕಲ್ಲು, ಗುಡ್ಡ, ಜಲಪಾತಗಳು ಕೂಡ ಮುಳುಗಡೆಯಾಗಿವೆ. ಈ ಹಿನ್ನೆಲೆ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಮುನ್ನೆಚ್ಚರಿಕೆ ಕ್ರಮವಾಗಿ ಹೊಗೆನಕಲ್‌ ಭೇಟಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: ಮೈದುಂಬಿ ಹರಿಯುತ್ತಿರುವ ಘಟಪ್ರಭಾ – ಮುದೋಳ್‌ನ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತ

ನೀರು ರಭಸವಾಗಿ ಹರಿಯುತ್ತಿರುವ ಹಿನ್ನಲೆ ಜಲಪಾತಗಳು ಕಣ್ಮರೆಯಾಗಿವೆ. ಕರ್ನಾಟಕ (Karnataka) ಅಷ್ಟೇ ಅಲ್ಲದೇ ತಮಿಳುನಾಡಿನಲ್ಲೂ (Tamil Nadu) ಕೂಡ ದೋಣಿ ವಿಹಾರ ಸ್ಥಗಿತಗೊಳಿಸಲಾಗಿದೆ. ಹೊಗೆನಕಲ್‌ನತ್ತ ಬರುವ ಪ್ರವಾಸಿಗರನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದು ವಾಪಸ್ ಕಳುಹಿಸುತ್ತಿದ್ದಾರೆ.

 

Share This Article