ಎಟಿಎಂ ಹಲ್ಲೆಕೋರ ಬೆಂಗ್ಳೂರಿಗೆ: ಫೆ.28ರಿಂದ 15ದಿನ ವಿಚಾರಣೆ

Public TV
1 Min Read

ಬೆಂಗಳೂರು: ನಗರದ ಕಾರ್ಪೋರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಆರೋಪಿ ಮಧುಕರ್ ರೆಡ್ಡಿಯನ್ನು ಶೀಘ್ರವೇ ಬೆಂಗಳೂರು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

ಫೆಬ್ರವರಿ 28ರಿಂದ 15 ದಿನಗಳ ಕಾಲ ಆರೋಪಿ ಮಧುಕರ್ ರೆಡ್ಡಿ ವಿಚಾರಣೆಗಾಗಿ ಬೆಂಗಳೂರು ಪೊಲೀಸರ ವಶಕ್ಕೆ ಒಪ್ಪಿಸಲು ಮದನಪಲ್ಲಿ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಎಟಿಎಂ ಹಲ್ಲೆಕೋರನನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರು ಇದೀಗ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಫೆಬ್ರವರಿ 4 ರಂದು ಮದನಪಲ್ಲಿಯಲ್ಲಿ ಕ್ರಿಮಿನಲ್ ಮಧುಕರ್ ರೆಡ್ಡಿ ಸೆರೆಸಿಕ್ಕಿದ್ದ. ಬಳಿಕ ಮಧುಕರ್‍ರೆಡ್ಡಿಯನ್ನು ಬಾಡಿ ವಾರೆಂಟ್ ಮೇಲೆ ಪಡೆಯಲು ಕರ್ನಾಟಕ ಸೇರಿ 3 ರಾಜ್ಯಗಳು ಪ್ರಯತ್ನ ಮಾಡಿದ್ದವು. ಆದ್ರೆ, ಎರಡು ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳ ಸಂಬಂಧ ಮಧುಕರ್ ರೆಡ್ಡಿ ಆಂಧ್ರ ಪೊಲೀಸರ ವಶವಾಗಿದ್ದು, ಸದ್ಯ ಆತನ ವಿಚಾರಣೆ ಮುಂದುವರೆದಿದೆ. `ನನಗೆ ಮಹಿಳೆಯರನ್ನು ಕಂಡ್ರೇ ಆಗಲ್ಲ. ಎಲ್ಲಿ ಹೋದ್ರೂ ನಾನು ಕೊಂದಿರೋದು ಮಹಿಳೆಯರನ್ನೇ’ ಈಗಾಗಲೇ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

 

Share This Article
Leave a Comment

Leave a Reply

Your email address will not be published. Required fields are marked *