ಬಾಗಲಕೋಟೆಯಲ್ಲಿ ಕಳ್ಳ ಸ್ವಾಮಿಜಿಗಳಿಗೆ ಬಿತ್ತು ಚಪ್ಪಲಿ ಏಟು

Public TV
1 Min Read

ಬಾಗಲಕೋಟೆ: ಸ್ವಾಮೀಜಿಗಳ ವೇಷ ಧರಿಸಿ ಮನೆಗಳಿಗೆ ನುಗ್ಗಿ ದರೋಡೆ ಮಾಡುತ್ತಿದ್ದ ನಕಲಿ ಸ್ವಾಮೀಜಿಗಳಿಗೆ ಗ್ರಾಮಸ್ಥರು ಚಪ್ಪಲಿ ಸೇವೆ ಮಾಡಿ ಪಾಠ ಕಲಿಸಿದ ಘಟನೆ ಬಾಗಲಕೋಟೆ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸಿಕೇರಿ ಮೂಲದ ಶ್ರೀನಿವಾಸ್ ಮತ್ತು ರವಿ, ಎಂಬುವರೇ ನಕಲಿ ಸ್ವಾಮಿಗಳು. ಇವರು ಕಳ್ಳತನ ಮಾಡಿದ್ದಲ್ಲದೆ, ಗ್ರಾಮದ ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಹಾಗೂ ಮಹಿಳೆಯರು ನಕಲಿ ಸ್ವಾಮಿಗಳಿಗೆ ಚಪ್ಪಲಿಯಿಂದ ಸಖತ್ ಥಳಿಸಿದ್ದಾರೆ.

ನಕಲಿ ಸ್ವಾಮಿಜಿಗಳಿಗೆ ಧರ್ಮದೇಟು ನೀಡಿದ ನಂತರ ಗ್ರಾಮಸ್ಥರು ಶ್ರೀನಿವಾಸ್ ಮತ್ತು ರವಿ ಇಬ್ಬರನ್ನು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದಾರೆ.

 

 

Share This Article
Leave a Comment

Leave a Reply

Your email address will not be published. Required fields are marked *