ಗರ್ಭಿಣಿಯಾಗಿಸಿ ಕೈಕೊಟ್ಟ ಯುವಕ- ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ

Public TV
1 Min Read

ಹಾವೇರಿ: ಪ್ರೀತ್ಸು.. ಪ್ರೀತ್ಸು.. ಅಂತ ಹಿಂದೆ ಬಿದ್ದು 2 ವರ್ಷಗಳ ಕಾಲ ಪ್ರೀತಿ ಮಾಡಿ ಸಂಬಂಧ ಬೆಳೆಸ್ದ. ಕೊನೆಗೆ ಕೈಕೊಟ್ಟು ಎಸ್ಕೇಪ್ ಆದ ವಂಚಕನ ಪತ್ತೆಗಾಗಿ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

2 ವರ್ಷದ ಹಿಂದೆ ಅನ್ಯಜಾತಿಯ ಯುವಕ ಗಂಗಾಧರ್ ಎಂಬಾತ ಹಾವೇರಿಯ ರಾಣೇಬೆನ್ನೂರಿನ ಹರನಗಿರಿ ನಿವಾಸಿ ದುರ್ಗಾಳ ಬೆನ್ನು ಬಿದ್ದು ಪ್ರೀತಿ ಮಾಡಿದ್ದ. ಬಳಿಕ ದೈಹಿಕ ಸಂಪರ್ಕ ಬೆಳೆಸಿ ಕೈ ಕೊಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಯುವತಿ ಆರು ತಿಂಗಳ ಗರ್ಭಿಣಿಯಾಗಿದ್ದು, ನನಗೆ ನ್ಯಾಯ ಕೊಡಿಸಿ ಅಂತಿದ್ದಾಳೆ.

ಯುವತಿ ಸದ್ಯ ಸರಸ್ವತಿ ಸ್ವಾಂತನ ಕೇಂದ್ರದ ಮೂಲಕ ದೂರು ದಾಖಲಿಸಿದ್ದಾಳೆ. ಸಂಸ್ಥೆಯ ಅಧ್ಯಕ್ಷೆ ಶಾರದಾ ಯುವತಿಗೆ ಧೈರ್ಯ ಹೇಳಿ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ರೆ ಪ್ರೀತಿಸಿ ಕೈ ಕೊಟ್ಟ ಆ ಮಹಾಶಯ ಎಲ್ಲಿದ್ದಾನೋ ಗೊತ್ತಿಲ್ಲ. ಆದ್ರೆ ನನ್ನನ್ನ ಆತನೊಂದಿಗೆ ಮದುವೆ ಮಾಡಿಸಿ, ನನಗೆ ನ್ಯಾಯ ಕೊಡಿಸಿ ಅಂತಾ ಹೇಳ್ತಿದ್ದಾಳೆ ಈ ಯುವತಿ.

Share This Article
Leave a Comment

Leave a Reply

Your email address will not be published. Required fields are marked *