ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಭಾರತ-ಇಂಗ್ಲೆಂಡ್ ಟಿ20 ಫೈನಲ್

Public TV
1 Min Read

– ಭಾರತ ಗೆದ್ರೆ ಕೊಹ್ಲಿ ಟಿ-20ಗೂ ಸಾಮ್ರಾಟ್

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಇಂಡೋ-ಇಂಗ್ಲೆಂಡ್ ಟಿ-20 ಸರಣಿಯ ಅಂತಿಮ ಹಣಾಹಣಿ ನಡೆಯಲಿದೆ. 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿರೋದ್ರಿಂದ ಜಿದ್ದಾಜಿದ್ದಿನ ಹೋರಾಟ ನಡೆಯೋದಂತೂ ಸತ್ಯ.

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಜಯಿಸಿದ ಕೊಹ್ಲಿ ಮೂರೂ ಪ್ರಕಾರದ ಪಂದ್ಯಗಳಿಗೆ ನಾಯಕರಾದ ಮೇಲೆ ಏಕದಿನ ಸರಣಿಯನ್ನೂ ಬಾಚಿಕೊಂಡು ಈಗ ಟಿ-20 ಮೇಲೂ ಕಣ್ಣಿಟ್ಟಿದ್ದಾರೆ. ಟೀಂ ಇಂಡಿಯಾ ಗೆದ್ರೆ ಆಂಗ್ಲರ ಭಾರತ ಪ್ರವಾಸ `ಹೋದ ಪುಟ್ಟಾ ಬಂದ ಪುಟ್ಟ’ ಎಂಬಂತಾಗುತ್ತೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಆರ್‍ಸಿಬಿ ನಾಯಕರಾಗಿರೋ ಹಾಗೂ ಟಿ-20 ನಾಯಕರಾಗಿ ಆಯ್ಕೆಯಾದ ಬಳಿಕ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ ಇದೇ ಮೊದಲ ಪಂದ್ಯವಾಗಿದೆ. ಹೀಗಾಗಿ ನೆಚ್ಚಿನ ನಾಯಕನ ಆಟದ ಜೊತೆಗೆ ಟೀಂ ಇಂಡಿಯಾದ ಆಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *