ರಾಜ್ಯದ ಹವಾಮಾನ ವರದಿ: 06-04-2024

By
1 Min Read

ರಾಜ್ಯದಲ್ಲಿ ಬಿಸಿಲಿನ ಅಬ್ಬರದ ನಡುವೆಯೂ ಕಳೆದ ಎರಡು ದಿನಗಳಿಂದ ಕೆಲವೆಡೆ ಮಳೆಯಾಗಿದೆ. ಇನ್ನೂ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ, ಉತ್ತರ ಕರ್ನಾಟಕದಲ್ಲಿ ಇಂದು ಉಷ್ಣಾಂಶದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಮಾಡಿದೆ.

ಇಂದಿನಿಂದ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣಕನ್ನಡ, ಬೀದರ್, ಕಲಬುರಗಿ, ಕೊಡಗು, ಮಂಡ್ಯ, ಮತ್ತು ಮೈಸೂರು ಜಿಲ್ಲೆಯಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಏ.7ರಂದು, ಬೆಂಗಳೂರು, ಹಾಸನ, ಹಾಗೂ ತುಮಕೂರು ಜಿಲ್ಲೆಗಳಲ್ಲಿ ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 37-22
ಮಂಗಳೂರು: 33-27
ಶಿವಮೊಗ್ಗ: 39-23
ಬೆಳಗಾವಿ: 38-25
ಮೈಸೂರು: 39-22

ಮಂಡ್ಯ: 39-22
ಮಡಿಕೇರಿ: 33-18
ರಾಮನಗರ: 39-22
ಹಾಸನ: 37-21
ಚಾಮರಾಜನಗರ: 38-22
ಚಿಕ್ಕಬಳ್ಳಾಪುರ: 38-23

ಕೋಲಾರ: 37-22
ತುಮಕೂರು: 38-22
ಉಡುಪಿ: 33-26
ಕಾರವಾರ: 32-24
ಚಿಕ್ಕಮಗಳೂರು: 36-20
ದಾವಣಗೆರೆ: 40-23

ಹುಬ್ಬಳ್ಳಿ: 40-24
ಚಿತ್ರದುರ್ಗ: 39-23
ಹಾವೇರಿ: 41-23
ಬಳ್ಳಾರಿ: 42-26
ಗದಗ: 41-25
ಕೊಪ್ಪಳ: 40-26

ರಾಯಚೂರು: 42-28
ಯಾದಗಿರಿ: 42-29
ವಿಜಯಪುರ: 41-28
ಬೀದರ್: 39-27
ಕಲಬುರಗಿ: 42-29
ಬಾಗಲಕೋಟೆ: 41-28

Share This Article