ರಾಜ್ಯದ ಹವಾಮಾನ ವರದಿ: 11-01-2024

Public TV
1 Min Read

ರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಇಂದು (ಜ.11) ಚಳಿ ಮತ್ತು ಹಗಲು ಒಣಹವೆ ಮುಂದುವರಿಯಲಿದೆ. ಕೆಲವೆಡೆ ಮೋಡಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ಚಾಮರಾಜನಗರ, ಕೋಲಾರ, ರಾಮನಗರಗಳ ಒಂದೆರಡು ಕಡೆ ಚದುರಿದ ಮಳೆಯಾಗಬಹುದು. ಉಳಿದಂತೆ ಚಳಿ ಮತ್ತು ಒಣ ಹವೆ ಇರಲಿದೆ. ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ನಿರೀಕ್ಷಿಸಬಹುದು. ಕರಾವಳಿ ಕರ್ನಾಟಕದ ಭಾಗದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸದ್ಯಕ್ಕೆ ಮೋಡಕವಿದ, ಒಣಹವೆ ಇರಲಿದ್ದು, ಮೂರ‍್ನಾಲ್ಕು ದಿನಗಳ ನಂತರ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಬಿಸಿಲು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 31-22
ಶಿವಮೊಗ್ಗ: 31-18
ಬೆಳಗಾವಿ: 30-18
ಮೈಸೂರು: 31-18

ಮಂಡ್ಯ: 30-18
ಮಡಿಕೇರಿ: 29-17
ರಾಮನಗರ: 29-18
ಹಾಸನ: 27-17
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 27-17

ಕೋಲಾರ: 26-17
ತುಮಕೂರು: 29-17
ಉಡುಪಿ: 31-22
ಕಾರವಾರ: 33-24
ಚಿಕ್ಕಮಗಳೂರು: 26-16
ದಾವಣಗೆರೆ: 31-19

weather

ಹುಬ್ಬಳ್ಳಿ: 32-19
ಚಿತ್ರದುರ್ಗ: 29-18
ಹಾವೇರಿ: 32-19
ಬಳ್ಳಾರಿ: 32-20
ಗದಗ: 31-19
ಕೊಪ್ಪಳ: 31-19

weather (1)

ರಾಯಚೂರು: 32-20
ಯಾದಗಿರಿ: 32-19
ವಿಜಯಪುರ: 32-21
ಬೀದರ್: 31-17
ಕಲಬುರಗಿ: 32-18
ಬಾಗಲಕೋಟೆ: 32-20

Share This Article