ಕೊಪ್ಪಳ: ಕಾಗೆ ಮುಟ್ಟಿದ ಗಡಿಗೆ ಒಳಗೆ ತರಬಾರದು ಎನ್ನುವ ಜನಗಳ ನಡುವೆ, ಕಾಗೆಯನ್ನು ಅಪಶಕುನ ಎಂದು ಮಾತನಾಡುವ ಜನರು ಇದ್ದಾರೆ. ಕಾಗೆ ಅಶುಭ ಎಂದು ಕರೆಯುವ ಜನಗಳ ನಡುವೆ ಇಲ್ಲೊಬ್ಬ ವ್ಯಕ್ತಿ ಕಾಗೆಯನ್ನು (Crow) ಕೋಗಿಲೆಯಂತೆ ಸಾಕುತ್ತಿದ್ದಾರೆ.
ಕೊಪ್ಪಳದ ಕಾರಟಗಿ ತಾಲೂಕಿನ ಮರ್ಲನ ಹಳ್ಳಿಯ ಶ್ರೀನಿವಾಸ ರೆಡ್ಡಿ ಅವರು ಕಾಗೆ ಸಾಕುತ್ತಿದ್ದಾರೆ. ಶ್ರೀನಿವಾಸ್ ಅವರ ಅಂಗಡಿಯ ಮುಂದೆ ಬೈಕಿಗೆ ಡಿಕ್ಕಿಯಾಗಿ ಗಾಯಗೊಂಡಿರುವ ಕಾಗೆಯನ್ನು ತೆಗೆದುಕೊಂಡು ಅದಕ್ಕೆ ಔಷಧೋಪಚಾರ ನೀಡಿ ಸಾಕುತ್ತಿದ್ದಾರೆ. ಗಾಯಗೊಂಡ ಕಾಗೆಯನ್ನು ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿ ಅದು ಗುಣಮುಖವಾಗಲು ಔಷಧಗಳನ್ನು ನೀಡುತ್ತಿದ್ದಾರೆ.
ಮನೆಯವರು ಹಾಗೂ ಪರಿಚಿತರೆಲ್ಲರಿಂದ ಅದಕ್ಕೆ ವಿರೋಧ ವ್ಯಕ್ತವಾದರೂ ಕೂಡ ಅದನ್ನು ಗುಣಮುಖವಾಗುವವರೆಗೂ ಉಪಚಾರ ಮಾಡುತ್ತೇನೆ ಎಂದು ದೃಢಸಂಕಲ್ಪದಿಂದ ಕಾಗೆಗೆ ಔಷಧಿ ನೀಡಿದ್ದಾರೆ. ಇದೀಗ ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿರುವ ಕಾಗೆ ಪೂರ್ತಿ ಗುಣಮುಖವಾದ ನಂತರ ಅದನ್ನು ಬಿಟ್ಟು ಬಿಡುವುದಾಗಿ ಹೇಳುತ್ತಿದ್ದಾರೆ. ಇದನ್ನೂ ಓದಿ: ಕೃಷ್ಣ ಭೈರೇಗೌಡರ ಆರೋಪ ತನಿಖೆಯಾಗುವ ತನಕ ಸದನಕ್ಕೆ ಹೋಗಲ್ಲ: ಬಿ.ಆರ್ ಪಾಟೀಲ್