ರಾಜ್ ಪುತ್ಥಳಿ ಎದುರು ‘ಮಾಯಾನಗರಿ’ ಟ್ರೈಲರ್ ಲಾಂಚ್

Public TV
1 Min Read

ಬೆಂಗಳೂರಿನ ಕುರುಬರಹಳ್ಳಿ ಸರ್ಕಲ್ ನಲ್ಲಿರುವ  ಅಣ್ಣಾವ್ರ ಪುತ್ಥಳಿ ಮುಂದೆ  ಶಂಕರ ಆರಾಧ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಮಾಯಾನಗರಿ (Mayanagari) ಚಲನಚಿತ್ರದ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಇದೊಂದು ಬಿಗ್ ಬಜೆಟ್ ನಲ್ಲಿ ನಿರ್ಮಾಣವಾದ ಥ್ರಿಲ್ಲರ್ ಚಿತ್ರವಾಗಿದ್ದು ಮೂರು ಅಥವಾ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.  ನಿರ್ದೇಶಕನಾಗಬೇಕೆಂಬ  ಕನಸು ಹೊತ್ತು ಬರುವ ಯುವಕನ ಪಾತ್ರದಲ್ಲಿ ನಟ  ಅನೀಶ್ ತೇಜೇಶ್ವರ್ ಅವರು  ಕಾಣಿಸಿಕೊಂಡಿದ್ದು, ಶ್ರಾವ್ಯರಾವ್  ನಾಯಕಿಯಾಗಿ ನಟಿಸಿದ್ದಾರೆ.

ಕಾಮಿಡಿ, ಲವ್, ಆಕ್ಷನ್, ಸೆಂಟಿಮೆಂಟ್ ಕಥಾಹಂದರವಿರುವ ಈ ಚಿತ್ರವನ್ನು ಸ್ಯಾಂಡಲ್ ವುಡ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶಂಕರ್ ಆರಾಧ್ಯ ಅವರೇ ನಿರ್ಮಾಣ ಸಹ ಮಾಡಿದ್ದಾರೆ.  ಶ್ವೇತಾ ಶಂಕರ್ ಸಹ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ,  ಶ್ರೀನಿವಾಸ್ ಅವರ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ. ವಿಕ್ರಮ್ ಮೋರ್  ಅವರ ಸಾಹಸ ಸಂಯೋಜನೆ,  ಮದನ್ – ಹರಿಣಿ ಹಾಗೂ ಮುರಳಿ ಅವರ ನೃತ್ಯನಿರ್ದೇಶನ, ವಿಜಯ್ ಎಂ. ಕುಮಾರ್ ಅವರ ಸಂಕಲನವೂ ಈ ಚಿತ್ರಕ್ಕಿದೆ.

 

ಅನೀಶ್ (Anish) ಜೋಡಿಯಾಗಿ ಶ್ರಾವ್ಯ ರಾವ್ (Shravya Rao) ಹಾಗೂ ತೇಜು ನಟಿಸಿದ್ದು. ಹಿರಿಯ ನಟ, ನಿರ್ದೇಶಕ ದ್ವಾರಕೀಶ್, ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ ಹಾಗೂ ನಿಹಾರಿಕಾ ಮೊದಲಾದವರು ಪ್ರಮುಖ ತಾರಾಬಳಗದಲ್ಲಿದ್ದಾರೆ.

Share This Article