Karnataka Bandh: ಎಲ್ಲ ರಾಜ್ಯದ ರೈತರೂ ಒಂದೇ, ಸರಕಾರಗಳು ಕೂತು ಮಾತನಾಡಲಿ : ನಟ ಶಿವಣ್ಣ

By
1 Min Read

ಕಾವೇರಿ (Cauvery)  ಸಮಸ್ಯೆ ಈಗಿನದ್ದಲ್ಲ. ಆವಾಗಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಈ ಸಮಸ್ಯೆ ಎಲ್ಲಿದೆ? ಯಾರು ಮಾಡುತ್ತಿರುವುದು? ಯಾಕೆ ಪರಿಹಾರ ಸಿಗುತ್ತಿಲ್ಲ ಎಂದು ಪ್ರಾಮಾಣಿಕವಾಗಿ ನೋಡಬೇಕಿದೆ. ಯಾವ ರಾಜ್ಯದವರಾದರೂ ಅವರು ರೈತರೆ. ಅದರಲ್ಲಿ ಭೇದ ಭಾವ ಮಾಡಬಾರದು. ಎರಡೂ ಸರಕಾರಗಳು ಕೂತುಕೊಂಡು ಚರ್ಚೆ ಮಾಡಿ ಸಮಸ್ಯೆಯನ್ನು ಸರಿ ಮಾಡಬೇಕು ಎಂದಿದ್ದಾರೆ ನಟ ಶಿವರಾಜ್ ಕುಮಾರ್.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೇತೃತ್ವದಲ್ಲಿ ಆಯೋಜನೆಯಾಗಿದ್ದ ಕಾವೇರಿ ನದಿ ನೀರು ಹೋರಾಟದ ಕಾರ್ಯಕ್ರಮದಲ್ಲಿ ಶಿವಣ್ಣ (Shivaraj Kumar) ಮಾತನಾಡಿ, ‘ಕಲಾವಿದರ ಹೋರಾಟಕ್ಕೆ ಬರೊಲ್ಲಅಂತೀರಾ. ಕಲಾವಿದರು ಬಂದು ಏನ್ ಮಾಡ್ಬೇಕು?. ನಾವು ಬಂದು ನಿಂತಿಕೊಳ್ತೀವಿ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದ್ರೆ ಸಮಸ್ಯೆ ಬಗೆಹರಿಯುತ್ತಾ?. ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು’ ಎಂದರು.

ನಿನ್ನೆಯಷ್ಟೇ ಕೆಲ ಕನ್ನಡ ಪರ ಹೋರಾಟಗಾರರು ತಮಿಳ ನಟ ಸಿದ್ಧಾರ್ಥ ಅವರ ಸಿನಿಮಾ ಪ್ರಚಾರವನ್ನು ಮಾಡಲು ಬಿಟ್ಟಿರಲಿಲ್ಲ. ಈ ನಡೆಗೆ ಶಿವರಾಜ್ ಕುಮಾರ್ ಆಕ್ಷೇಪಣೆ ವ್ಯಕ್ತ ಪಡಿಸಿದರು. ‘ಮೊನ್ನೆ ಕಲಾವಿದರೊಬ್ಬರ ಮಾತನ್ನು ನಿಲ್ಲಿಸಿದ್ರಂತೆ ಅದು ತಪ್ಪು ಅಲ್ವಾ? ಎಂದು ವೇದಿಕೆಯ ಮೇಲೆಯೇ ಪ್ರಶ್ನೆ ಮಾಡಿದರು.

ಈ ಹೋರಾಟದಲ್ಲಿ ಶಿವರಾಜ್‌ಕುಮಾರ್, ದರ್ಶನ್, ಶ್ರೀಮುರಳಿ, ಹಿರಿಯ ನಟ ಶ್ರೀನಿವಾಸ್ ಮೂರ್ತಿ, ಪದ್ಮ ವಾಸಂತಿ, ಉಮಾಶ್ರೀ, ನವೀನ್ ಕೃಷ್ಣ, ಲೂಸ್ ಮಾದ, ಪ್ರಮೀಳಾ ಜೋಷಾಯ್, ವಸಿಷ್ಠ ಸಿಂಹ, ಧ್ರುವ ಸರ್ಜಾ, ಪೂಜಾ ಗಾಂಧಿ, ಶ್ರುತಿ,  ಸುಂದರ್ ರಾಜ್ ಸೇರಿದಂತೆ ಹಲವು ಕಿರುತೆರೆ ನಟ-ನಟಿಯರು ಭಾಗಿಯಾಗಿದ್ದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್