ಧೈರ್ಯವಿದ್ರೆ ನಮ್ಮವರಲ್ಲಿ ಒಬ್ಬರನ್ನು ಟಚ್ ಮಾಡಿ ನೋಡಿ- ಸ್ಟಾಲಿನ್‍ಗೆ ಅಣ್ಣಾಮಲೈ ಚಾಲೆಂಜ್

Public TV
1 Min Read

ಚೆನ್ನೈ: ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಎಂ.ಕೆ ಸ್ಟಾಲಿನ್ (MK Stalin) ವಿರುದ್ಧ ಇದೀಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಕಿಡಿಕಾರಿದ್ದಾರೆ.

ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅಣ್ಣಾಮಲೈ ಸಿಎಂಗೆ ಸವಾಲೊಂದನ್ನು ಎಸೆದಿದ್ದಾರೆ. ಧೈರ್ಯವಿದ್ದರೆ ನಮ್ಮಲ್ಲಿ ಒಬ್ಬರನ್ನು ಟಚ್ ಮಾಡಿ ನೋಡಿ.. ನೀವೇನು ಕೊಟ್ಟಿದ್ದೀರೋ ಅದು ನಿಮಗೆ ವಾಪಸ್ ಆಗುತ್ತದೆ ಎಂಬುದನ್ನು ಮರೆಯಬೇಡಿ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಸಚಿವ ಸೆಂಥಿಲ್‌ ಬಾಲಾಜಿಗೆ ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ – ಇಡಿ ಅರೆಸ್ಟ್‌ ಬೆನ್ನಲ್ಲೇ ವೈದ್ಯರ ಸಲಹೆ

ಈ ಹಿಂದೆ ಕನಿಮೋಳಿ ಬಂಧನವಾದಾಗಲೂ ಸ್ಟಾಲಿನ್ ಇಷ್ಟೊಂದು ಆಕ್ರೋಶಿತರಾಗಿಲ್ಲ. ಸೇಂಥಿಲ್ ಡಿಎಂಕೆ ಪಕ್ಷದ ಖಜಾಂಚಿ ಎಂದು ಜನ ಹೇಳುತ್ತಿದ್ದಾರೆ. ಬೆದರಿಕೆಯ ಹೇಳಿಕೆಗಳನ್ನು ನೀಡುವ ಮೂಲಕ ಸ್ಟಾಲಿನ್ ತಮ್ಮ ಲಿಮಿಟ್ ದಾಟುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುತ್ತೇವೆ ಎಂದು ನಂಬಿದ್ದೀರಾ..?. ಹಾಗಾದ್ರೆ ನಮ್ಮಲ್ಲಿ ಯಾರಾದ್ರೂ ಒಬ್ಬರನ್ನು ಟಚ್ ಮಾಡಿ. ನೀವೇನು ಕೊಟ್ಟಿದ್ದೀರೋ ಅದನ್ನು ನೀವು ಮರಳಿ ಪಡೆಯುತ್ತೀರಿ ನೆನಪಿರಲಿ ಎಂದು ಅಣ್ಣಾಮಲೈ (Annamalai) ವಾಗ್ದಾಳಿ ನಡೆಸಿದ್ದಾರೆ.

ಸ್ಟಾಲಿನ್ ಏನು ಹೇಳಿದ್ದರು..?: ಇಡಿ (ED) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಸೇಂಥಿಲ್ ಅವರನ್ನು ಬಂಧಿಸುತ್ತಿದ್ದಂತೆಯೇ ಇತ್ತ ಸ್ಟಾಲಿನ್ ವೀಡಿಯೋವೊಂದನ್ನು ಬಿಡುಗಡೆ ಮಾಡಿ ಬಿಜೆಪಿಗೆ ಸವಾಲೆಸೆದಿದ್ದರು. ಡಿಎಂಕೆಯಿಂದ ಪ್ರತಿಯಾಗಿ ಬರುವ ಯಾವುದೇ ರೀತಿಯ ಪ್ರತೀಕಾರವನ್ನು ಬಿಜೆಪಿಗೆ ನಿಭಾಯಿಸಲು ತುಂಬಾ ಕಷ್ಟವಾಗಬಹುದು. ಸೇಡು ತೀರಿಸಿಕೊಳ್ಳಲು ಕೇಂದ್ರದ ಏಜೆನ್ಸಿಗಳನ್ನು ನಿಯೋಜಿಸುವ ಬದಲು ಮುಖಾಮುಖಿ ಬರುವಂತೆ ಸವಾಲು ಹಾಕಿದ್ದರು. ಇದು ಬೆದರಿಕೆಯಲ್ಲ ಬದಲಿಗೆ ಇದು ಎಚ್ಚರಿಕೆ ಎಂದಿದ್ದರು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ದೇಶವು ಅಘೋಷಿತ ತುರ್ತು ಪರಿಸ್ಥಿತಿಯನ್ನು ಅನುಭವಿಸುತ್ತಿದೆ ಎಂದು ಸ್ಟಾಲಿನ್ ಕಿಡಿಕಾರಿದ್ದರು.

Share This Article