ರಾಜ್ಯದ ಹವಾಮಾನ ವರದಿ: 31-05-2023

Public TV
1 Min Read

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಂಗಳವಾರ ಧಾರಾಕಾರವಾಗಿ ಮಳೆ ಸುರಿದಿದ್ದು, ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಇಂದು ಕೂಡ ರಾಜ್ಯದಲ್ಲಿ ಗುಡುಗು ಮಿಂಚಿನ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರೀ ಮಳೆಯ ಹಿನ್ನೆಲೆ ರಾಜ್ಯದಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದು, ದಕ್ಷಿಣ, ಉತ್ತರ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಗಾಳಿಯ ವೇಗ 40ರಿಂದ 50 ಕಿ.ಮೀ ವೇಗವಿರಲಿದ್ದು, ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 33-26
ಶಿವಮೊಗ್ಗ: 33-23
ಬೆಳಗಾವಿ: 35-23
ಮೈಸೂರು: 33-22

ಮಂಡ್ಯ: 33-23
ಮಡಿಕೇರಿ: 26-18
ರಾಮನಗರ: 33-23
ಹಾಸನ: 31-21
ಚಾಮರಾಜನಗರ: 32-22
ಚಿಕ್ಕಬಳ್ಳಾಪುರ: 31-21

ಕೋಲಾರ: 33-22
ತುಮಕೂರು: 32-22
ಉಡುಪಿ: 33-26
ಕಾರವಾರ: 33-27
ಚಿಕ್ಕಮಗಳೂರು: 29-20
ದಾವಣಗೆರೆ: 37-23

ಹುಬ್ಬಳ್ಳಿ: 36-24
ಚಿತ್ರದುರ್ಗ: 34-23
ಹಾವೇರಿ: 36-24
ಬಳ್ಳಾರಿ: 38-26
ಗದಗ: 37-24
ಕೊಪ್ಪಳ: 37-25

weather

ರಾಯಚೂರು: 39-28
ಯಾದಗಿರಿ: 40-28
ವಿಜಯಪುರ: 39-26
ಬೀದರ್: 38-27
ಕಲಬುರಗಿ: 40-28
ಬಾಗಲಕೋಟೆ: 39-26

Share This Article