ಕಳೆದ ವಾರದಿಂದ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಇದರಿಂದ ಭೂಮಿ ತಂಪೇರಿದ್ದು, ಹಲವು ಕಡೆ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದಾದ್ಯಂತ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಅಲ್ಲದೇ ಒಡಿಶಾದಲ್ಲಿ ಮೋಚಾ ಚಂಡಮಾರುತ ಅಪ್ಪಳಿಸಲಿದ್ದು, ಇದರ ಪರಿಣಾಮ ಕರ್ನಾಟಕದಲ್ಲೂ ಇರಲಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 33-26
ಶಿವಮೊಗ್ಗ: 35-22
ಬೆಳಗಾವಿ: 34-21
ಮೈಸೂರು: 32-22
ಮಂಡ್ಯ: 32-23
ಮಡಿಕೇರಿ: 28-18
ರಾಮನಗರ: 31-22
ಹಾಸನ: 31-20
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 28-21
ಕೋಲಾರ: 29-22
ತುಮಕೂರು: 30-22
ಉಡುಪಿ: 33-26
ಕಾರವಾರ: 33-27
ಚಿಕ್ಕಮಗಳೂರು: 30-19
ದಾವಣಗೆರೆ: 36-23
ಹುಬ್ಬಳ್ಳಿ: 36-22
ಚಿತ್ರದುರ್ಗ: 34-22
ಹಾವೇರಿ: 36-22
ಬಳ್ಳಾರಿ: 34-25
ಗದಗ: 36-23
ಕೊಪ್ಪಳ: 36-24
ರಾಯಚೂರು: 34-25
ಯಾದಗಿರಿ: 34-25
ವಿಜಯಪುರ: 36-24
ಬೀದರ್: 32-23
ಕಲಬುರಗಿ: 34-25
ಬಾಗಲಕೋಟೆ: 37-24