ಕಾರಿನಿಂದ ಕುಸಿದಿದ್ದಕ್ಕೆ ಸಿದ್ದರಾಮಯ್ಯರನ್ನು ಟೀಕಿಸುವುದು ಸರಿಯಲ್ಲ – ಬಿಎಸ್‍ವೈ

Public TV
1 Min Read

ರಾಯಚೂರು: ಸಿದ್ದರಾಮಯ್ಯ (Siddaramaiah) ಕಾರಿನ ಮೆಟ್ಟಿಲಿನಿಂದ ಕುಸಿದು ಬಿದ್ದ ವಿಚಾರವಾಗಿ ಟೀಕಿಸುವುದು ಸರಿಯಲ್ಲ, ಅವರು ಆರೋಗ್ಯದಲ್ಲಿ ಚೇತರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ  (B.S Yediyurappa) ಹೇಳಿದ್ದಾರೆ.

ಲಿಂಗಸೂಗೂರಿನಲ್ಲಿ (Lingasugur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ವಿಚಾರಗಳನ್ನು ಇಟ್ಟುಕೊಂಡು ವ್ಯಕ್ತಿಗಳನ್ನು ಟೀಕಿಸುವುದು ಸರಿಯಾದ ನಡೆಯಲ್ಲ. ಸಿದ್ದರಾಮಯ್ಯ ಅವರು ಸುಧಾರಿಸಿಕೊಳ್ಳಲಿ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಕಾಳಿಂಗ ಸರ್ಪ – ಸುಧಾಕರ್

ಸಿದ್ದರಾಮಯ್ಯ ಅವರ ಲಿಂಗಾಯತ ಸಮಾಜ ಬಿ.ಎಲ್.ಸಂತೋಷರನ್ನ ವಿರೋಧಿಸುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಏನಾದರೂ ಹೇಳಲಿ. ಇಡೀ ಲಿಂಗಾಯತ (Lingayat) ಸಮಾಜ ಬಿಜೆಪಿಯ ಜೊತೆಗೆ ಇದೆ. ವಿರೇಂದ್ರ ಪಾಟೀಲ್ ಅವರಿಗೆ ಅಪಮಾನ ಮಾಡಿರುವ ಕಾಂಗ್ರೆಸ್‍ಗೆ ವೀರಶೈವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದಿದ್ದಾರೆ.

85 ರಿಂದ 90 ಭಾಗ ವೀರಶೈವರು ನಮ್ಮ ಪರವಾಗಿದ್ದಾರೆ. ಎಲ್ಲಾ ಕಡೆಗಳಲ್ಲೂ ವೀರಶೈವ ಸಮಾಜದ ಮುಖಂಡರಿಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ

Share This Article