ಹಾಸನ : ಶಾಸಕ ಪ್ರೀತಂಗೌಡ (Preetam Gowda) ಮಾಡಿರುವ ಕೆಲಸದ ಆಧಾರದಲ್ಲಿ ಹಾಸನ (Hassan) ಜಿಲ್ಲೆಯಲ್ಲಿ ಒಂದಲ್ಲ 4 ಸೀಟು ಗೆಲ್ಲುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದರು.
ರೋಡ್ ಶೋನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಪ್ರೀತಂಗೌಡ ಮಾಡಿರುವ ಕೆಲಸದ ಆಧಾರದಲ್ಲಿ ಹಾಸನ ಜಿಲ್ಲೆಯಲ್ಲಿ ಒಂದಲ್ಲ ನಾಲ್ಕು ಸೀಟು ಗೆಲ್ಲುತ್ತೇವೆ. ಜೆಡಿಎಸ್ನ (JDS) ಎಲ್ಲಾ ನಾಯಕರು ಪ್ರೀತಂಗೌಡಗೆ ಚಾಲೆಂಜ್ ಮಾಡಿದ್ದಾರೆ. ಪ್ರೀತಂಗೌಡರ ಜೊತೆ ನಾನು ಸೇರಿದಂತೆ ಇಡೀ ಬಿಜೆಪಿ ಇದೆ. ಬಿಜೆಪಿ (BJP) ಮುಖಂಡರು ಹಾಗೂ ಕಾರ್ಯಕರ್ತರನ್ನು ಮೈದಾನದಿಂದ ಓಡಿಸುವುದು ಅಷ್ಟು ಸುಲಭವಲ್ಲ ಎಂದು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್, ಜೆಡಿಎಸ್ನವರು ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದರು. ನಾವು ಅದನ್ನು ತೆಗೆದು ಹಿಂದುಳಿದ ವರ್ಗದವರಿಗೆ ನೀಡಿದ್ದೇವೆ. ಜೆಡಿಎಸ್ ವೋಟು ಕೊಟ್ಟರೆ ಕಾಂಗ್ರೆಸ್ಗೆ ವೋಟು ಕೊಟ್ಟ ರೀತಿ ಆಗುತ್ತದೆ. ಸಕಲೇಶಪುರ ಕ್ಷೇತ್ರದ ಜನತೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಸಿಮೆಂಟ್ ಮಂಜು ಗೆದ್ದಾಗ ಮತ್ತೆ ಬರುತ್ತೇನೆ. ಯುವಕ ಸಿಮೆಂಟ್ ಮಂಜುಗೆ ಯುವಕರು ವೋಟು ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ದೋಸ್ತಿಗಳ ನಡುವೆ ಜಂಗಿ ಕುಸ್ತಿ – ಬಳ್ಳಾರಿ ಅಖಾಡ ಹೇಗಿದೆ?
ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ. ಒಕ್ಕಲಿಗ, ಲಿಂಗಾಯಿತ, ಎಸ್ಟಿ ಸಮುದಾಯದ ಅಭಿವೃದ್ಧಿಗೆ ಕೊಡುಗೆ ಕೊಟ್ಟಿದ್ದೇವೆ. ಸಿಮೆಂಟ್ ಮಂಜು, ಪ್ರೀತಂಗೌಡರಿಗೆ ವೋಟು ಕೊಟ್ಟು ಗೆಲ್ಲಿಸಿ ಎಂದ ಅವರು, ಯಾರ್ಯಾರು ಕಮಲಕ್ಕೆ ಓಟು ಹಾಕ್ತಿರಾ ಕೈ ಎತ್ತಿ ಎಂದು ಪ್ರಶ್ನಿಸಿ, ಇಷ್ಟು ಜನ ಸೇರಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಹೈಡ್ರಾಮಾ – ಅಧಿಕಾರಿಗಳೇ ಎದುರಲ್ಲೇ ರಸ್ತೆ ಮೇಲೆ ಬಿದ್ದು ಉರುಳಾಡಿದ ಇಓ