ಮತ್ತೊಮ್ಮೆ ಸಿಎಂ ಆಗಲೆಂದು ಹರಕೆ- ಸಿದ್ದು ಭಾವಚಿತ್ರ ಹಿಡಿದು ಅಭಿಮಾನಿ ಶ್ರೀಶೈಲ ಪಾದಯಾತ್ರೆ

Public TV
1 Min Read

ರಾಯಚೂರು: ಮುಂಬರುವ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‍ (Congress) ಗೆ ಬಹುಮತ ಬಂದು ಸಿದ್ದರಾಮಯ್ಯ (Siddaramaiah) ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಅಂತ ರಾಯಚೂರು ಜಿಲ್ಲೆಯ ಸಿದ್ದರಾಮಯ್ಯ ಅಭಿಮಾನಿಯೊಬ್ಬ ಶ್ರೀಶೈಲ ಪಾದಯಾತ್ರೆ ಹೊರಟಿದ್ದಾರೆ.

ದೇವದುರ್ಗ ತಾಲೂಕಿನ ಮಲ್ಲಿಗೆದೊಡ್ಡಿ ಗ್ರಾಮದ ಸಿದ್ದೇಶ್ ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಹರಕೆ ಹೊತ್ತು ಗ್ರಾಮದಿಂದ ಶ್ರೀಶೈಲ ವರೆಗೆ ಪಾದಯಾತ್ರೆ ನಡೆಸಿದ್ದಾರೆ. ಸಿದ್ದರಾಮಯ್ಯ ಭಾವಚಿತ್ರ ಹಿಡಿದು ಸುಮಾರು 350 ಕಿ.ಮೀ ಪಾದಯಾತ್ರೆ ಮಾಡಲಿದ್ದಾರೆ. ಯುಗಾದಿ ದಿನ ಶ್ರೀಶೈಲ ತಲುಪಲಿದ್ದು ಮಲ್ಲಿಕಾರ್ಜುನನಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: Karnataka Politics: ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರದ ಪರ್ವ ಏಳು ಬೀಳುಗಳು

ಯುಗಾದಿ (Ugadi 2023) ಹಿನ್ನೆಲೆ ಎಲ್ಲೆಡೆಯಿಂದಲೂ ಭಕ್ತರು ಶ್ರೀಶೈಲ ಪಾದಯಾತ್ರೆ ಹೊರಟಿದ್ದಾರೆ. ಪಾದಯಾತ್ರೆ ತೆರಳುವವರಿಗೆ ಅಲ್ಲಲ್ಲಿ ಜನ ದಾನಿಗಳು ಊಟ, ನೀರು, ತಿಂಡಿ, ಅಗತ್ಯ ಔಷಧಿ ವ್ಯವಸ್ಥೆ ಮಾಡಿದ್ದಾರೆ. ಪಾದಯಾತ್ರಿಗಳಿಗೆ ಅನುಕೂಲವಾಗಲಿ ಅಂತ ತಾತ್ಕಾಲಿಕ ತಂಗುದಾಣಗಳನ್ನು ನಿರ್ಮಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *