ಸಿದ್ದರಾಮಯ್ಯ ಒಬ್ಬ ಸುಳ್ಳುಗಾರ, ಅವರಿಗೆ ಕಿವಿ ಕೇಳಿಸಲ್ಲ, ಕಣ್ಣು‌ ಕಾಣಲ್ಲ : ಪ್ರಭು ಚವ್ಹಾಣ್ ಟಾಂಗ್

Public TV
1 Min Read

ಬೀದರ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒಬ್ಬ ಸುಳ್ಳುಗಾರ, ಅವರಿಗೆ ಕಿವಿ ಕೇಳಿಸಲ್ಲ ಹಾಗೂ ಕಣ್ಣು‌ ಕಾಣಲ್ಲ ಎಂದು ಮಾಜಿ ಸಿಎಂ‌ ಸಿದ್ದರಾಮಯ್ಯ ವಿರುದ್ಧ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ (Prabhu Chauhan) ತೀವ್ರ ವಾಗ್ದಾಳಿ ನಡೆಸಿದರು.

ಬೀದರ್‌ನ‌ ಬಿಜೆಪಿ (BJP) ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಸುಳ್ಳಿನ ಸರ್ದಾರ ಇದ್ದಂತೆ, ಈಗ ಸಿದ್ದರಾಮಯ್ಯನ ಆಟ ಮುಗಿದಿದೆ ಎಂದರು. ಬಿಜೆಪಿ ಸರ್ಕಾರ‌‌ 40% ಸರ್ಕಾರ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದರು, ಆದರೆ ಅವರು ಎಲ್ಲಿ ಇದನ್ನು ಪ್ರೂವ್ ಮಾಡಿದ್ದಾರೆ? ನಂದು ಏನಾದ್ರು ಇದ್ರೆ ಪ್ರೂವ್ ಮಾಡಿ, ನಾನು‌ ತಕ್ಷಣವೇ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಸೋಮವಾರ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ: ಬಿಎಸ್‍ವೈ

ಬರೀ ಗಾಳಿಯಲ್ಲಿ ಸುಳ್ಳು ಹೇಳಿದ್ರೆ ಹೆಂಗೆ? ಔರಾದ್‌ಗೆ ಅರ್ಧ ಗಂಟೆ ಬಂದು ಸಿದ್ದರಾಮಯ್ಯನವರೇ ಸುಮ್ಮನೆ ಆರೋಪ ಮಾಡುತ್ತೀರಿ, ಯಾರೋ‌ ಕಿವಿಯಲ್ಲಿ ಹೇಳಿದ್ರು ಸಿದ್ದರಾಮಯ್ಯ ಅದನ್ನೇ ಹೇಳಿದರು. ಆದರೆ ಕಳೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಕ್ಷೇತ್ರದಲ್ಲಿ ಸರಿಯಾದ ರಸ್ತೆ ಮಾಡಲು ಆಗಲಿಲ್ಲ. ಇವರಿಂದ ಇವರು ಒಬ್ಬ ಪೆದ್ದಾ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಮಹಿಳೆಗೆ ಆ್ಯಸಿಡ್ ಕುಡಿಸಿದ ಅತ್ತೆ

Share This Article
1 Comment

Leave a Reply

Your email address will not be published. Required fields are marked *