ಮೋದಿ ಆಗಮನ ಎಫೆಕ್ಟ್, ನೆಲಮಂಗಲ ಬಳಿ ಗುಂಡಿ ಮುಕ್ತ ಭಾಗ್ಯ- ಜನಾಕ್ರೋಶ

Public TV
1 Min Read

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋದಿ ಬರ್ತಾರೆ ಅಂತ ರಸ್ತೆಗಳಿಗೆ ಗುಂಡಿ (Potholes) ಮುಕ್ತ ಭಾಗ್ಯ ಸಿಕ್ಕಿದೆ. ರಸ್ತೆಗಳೆಲ್ಲ ಪಳಪಳ ಅಂತ ಹೊಳೆಯುತ್ತಿದೆ. ರಸ್ತೆ ಅದ್ವಾನ ಬಗ್ಗೆ ಸಾರ್ವಜನಿಕರು ಕಂಪ್ಲೆಂಟ್ ಕೊಟ್ರೂ ತಲೆಕೆಡಿಸಿಕೊಂಡಿರದ ಅಧಿಕಾರಿಗಳು ಇದೀಗ ರಸ್ತೆ ರಿಪೇರಿ ಮಾಡಿದ್ದಾರೆ.

ಹೌದು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ, ಇಂಡಿಯಾ ಎನರ್ಜಿ ವೀಕ್ 2023 (India Energy Week 2023) ಕ್ಕೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಬೆಂಗಳೂರಿನ ನೆಲಮಂಗಲ ಬಳಿ ರಸ್ತೆಗಳಿಗೆ ಗುಂಡಿ ಮುಕ್ತ ಭಾಗ್ಯ ಸಿಕ್ಕಿದೆ. ರಸ್ತೆಗಳೆಲ್ಲ ಪಳಪಳ ಅಂತ ಹೊಳೆಯುತ್ತಿದೆ. ಇದನ್ನೂ ಓದಿ: ಸೋಮವಾರ ಮೋದಿ ಒನ್ ಡೇ ರಾಜ್ಯ ಪ್ರವಾಸ – ಬೆಂಗಳೂರು, ತುಮಕೂರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿ

ತರಾತುರಿಯಲ್ಲಿ ರಸ್ತೆ ಕಾಮಗಾರಿ: ರಸ್ತೆ ಗುಂಡಿ ಬಗ್ಗೆ ಈ ಹಿಂದೆ ಬಿಬಿಎಂಪಿ (BBMP) ಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸಾವರ್ಜನಿಕರು ಕಂಪ್ಲೆಂಟ್ ಕೊಟ್ರೂ ತಲೆಕೆಡಿಸಿಕೊಂಡಿರಲಿಲ್ಲ. ಈಗ ಮೋದಿ ಬರ್ತಾರೆ ಅಂತ ಎಲ್ಲಾ ರಸ್ತೆಗಳನ್ನ ಮುಚ್ಚಿ ಗುಂಡಿ ಮುಕ್ತಮಾಡಿದ್ದಾರೆ. ಆದರೆ ಕಳೆದ ಬಾರಿ ಮೋದಿ ಬಂದಾಗ ಕಳಪೆ ರೋಡ್ ತರ ಈ ಬಾರಿಯೂ ತರಾತುರಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗಿದೆ. ಇದು ಕೇವಲ ಮೋದಿ ಬಂದು ಹೋಗೋವರೆಗೂ ಮಾತ್ರ ಇರುತ್ತಾ ಅನ್ನೋ ಪ್ರಶ್ನೆ ಮೂಡಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *