ಸಿದ್ದು ಸೋಲಿಸಲು ಅಖಾಡಕ್ಕಿಳಿದ ಬಿಎಲ್‌ ಸಂತೋಷ್‌

Public TV
2 Min Read

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ರಾಜಕೀಯ ಮೇಲಾಟಗಳು ಜೋರಾಗಿದೆ. ಈ ನಡುವೆ ಸಿದ್ದರಾಮಯ್ಯ (Siddaramaiah) ಕೋಲಾರದಿಂದಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬಳಿಕ ಕೋಲಾರ (Kolara) ಈಗ ಕರ್ನಾಟಕದಲ್ಲಿ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ. ಹೀಗಾಗಿ ಕೋಲಾರ ಆರ್‌ಎಸ್‍ಎಸ್ (RSS) ಟಾರ್ಗೆಟ್ ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದ್ದು, ಸಿದ್ದರಾಮಯ್ಯ ಅವರನ್ನು ಸೋಲಿಸಲು ಖುದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್‌ ಸಂತೋಷ್ (BL Santosh) ಅಖಾಡಕ್ಕಿಳಿದ್ದಿದ್ದಾರೆ.

ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಹಣಿಯಲು ಜಾತಿ ತಂತ್ರಗಾರಿಕೆ ಮಾಡಿದ್ದಾರೆ. ಸಿದ್ದರಾಮಯ್ಯರ ಒಂದು ಕಾಲದ ಶಿಷ್ಯಂದಿರ ಜತೆ ಸಂತೋಷ್ ರಣತಂತ್ರ ಮಾಡಿದ್ದು, ಕೋಲಾರದಲ್ಲಿ ಜಾತಿ ಸಮೀಕರಣದ ತಂತ್ರ ಹೆಣೆಯಲು ಸಂತೋಷ್ ಟೀಮ್ ಮುಂದಾಗಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ

ಪರಿಶಿಷ್ಟ ಸಮುದಾಯಗಳು ಹಾಗೂ ಒಕ್ಕಲಿಗರ ಜಾತಿ ವ್ಯೂಹ ರಚನೆಗೆ ತಂತ್ರ ಹೆಣೆದಿದ್ದು, ಈ ಎರಡೂ ಸಮುದಾಯಗಳನ್ನು ಒಲಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದ್ದಾರೆ. ಮೀಸಲಾತಿ ಕೊಡುವ ಮೂಲಕ ಈಗಾಗಲೇ ಪರಿಶಿಷ್ಟ ಸಮುದಾಯಗಳ ಒಲವು ಹಾಗೂ ಕೆಂಪೇಗೌಡ ಪ್ರತಿಮೆ, 2ಸಿ ಪ್ರವರ್ಗದಲ್ಲಿ ಮೀಸಲು ಹೆಚ್ಚಿಸಿ ಒಕ್ಕಲಿಗರ ಸಖ್ಯ ಬೆಳೆಸಲು ಮುಂದಾಗಿದ್ದಾರೆ.

ಪಕ್ಷದ ದಲಿತ ಮತ್ತು ಒಕ್ಕಲಿಗ ನಾಯಕರ ಮೂಲಕ ಎರಡೂ ಸಮುದಾಯಗಳ ಮನವೊಲಿಕೆ ಕಸರತ್ತು ಮಾಡಿದ್ದಾರೆ. ಈ ಎರಡು ಸಮುದಾಯಗಳು ಬೆಂಬಲ ನೀಡುವುದರ ಜೊತೆ ಬಲಿಜರು, ಬ್ರಾಹ್ಮಣ ಮತದಾರರು ಬಿಜೆಪಿ ಪರವಾಗಿದ್ದಾರೆ. ಈ ತಂತ್ರಗಾರಿಕೆ ಯಶಸ್ವಿಯಾದರೆ ಕೋಲಾರದಲ್ಲಿ ಬಿಜೆಪಿಗೆ ಜಯ ಸಿಗಬಹುದು ಎಂಬ ಲೆಕ್ಕಾಚಾರವನ್ನು ಕಮಲ ನಾಯಕರು ಹಾಕಿಕೊಂಡಿದ್ದಾರೆ. ಬೈರತಿ ಬಸವರಾಜು, ಈಶ್ವರಪ್ಪ, ಎಂಟಿಬಿ, ಅಭ್ಯರ್ಥಿ ವರ್ತೂರು ಪ್ರಕಾಶ್ ಮೂಲಕ ಕುರುಬ ಮತ ಸೆಳೆಯಲು ಪ್ಲಾನ್ ಮಾಡಲಾಗಿದೆ.

ಕೋಲಾರ ಲೆಕ್ಕಾಚಾರ
ಕ್ಷೇತ್ರದ ಒಟ್ಟು ಮತಗಳು – 2.32 ಲಕ್ಷ
ಪರಿಶಿಷ್ಟ ಜಾತಿ – 49 ಸಾವಿರ
ಮುಸ್ಲಿಮರು – 51 ಸಾವಿರ
ಒಕ್ಕಲಿಗರು – 40 ಸಾವಿರ
ಕುರುಬರು – 28 ಸಾವಿರ
ಕ್ರೈಸ್ತರು – 12 ಸಾವಿರ
ಪರಿಶಿಷ್ಟ ಪಂಗಡ- 11 ಸಾವಿರ
ಬ್ರಾಹ್ಮಣ, ಬಲಿಜ ಸೇರಿ ಇತರರು – 40 ಸಾವಿರ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *