13 ಜನ ಸಚಿವರ ಸಿಡಿಗಳು ಚುನಾವಣೆ ಒಳಗೆ ಬಿಡುಗಡೆಯಾಗಲಿದೆ: ಸಿಎಂ ಇಬ್ರಾಹಿಂ ಹೊಸ ಬಾಂಬ್

Public TV
2 Min Read

ಕೋಲಾರ: ಕಾಂಗ್ರೆಸ್‍ನವರು (Congress) ಬಾಯಿ ಬಿಡುತ್ತಿಲ್ಲ. ಕಾಂಗ್ರೆಸ್‍ನಿಂದ ಬಿಜೆಪಿಗೆ (BJP) ಹೋದ 13 ಜನ ಶಾಸಕರ ಸಿಡಿ (CD) ಇದೆ. ಸದನದಲ್ಲಿ ಅವರೇ ಹೇಳಿದ್ದಾರೆ. ಸ್ಟೇ ತೆಗೆದುಕೊಂಡಿದ್ದಾರೆ. ಗೋಪಾಲಯ್ಯ ಒಬ್ಬ ಮಾತ್ರ ತೆಗೆದುಕೊಂಡಿಲ್ಲ. ಉಳಿದಂತೆ 13 ಜನ ಸಚಿವರ ಸಿಡಿಗಳು ಚುನಾವಣೆ ಒಳಗೆ ಬಿಡುಗಡೆಯಾಗಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹೊಸ ಬಾಂಬ್ ಸಿಡಿಸಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಯಾಂಟ್ರೋ ರವಿ (Santro Ravi Case)  ಪ್ರಕರಣದ ವಿಚಾರಣೆ ಪಾರದರ್ಶಕವಾಗಿರಬೇಕಾದ್ರೆ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ಮಾಡಿಸುವುದು ಉತ್ತಮ. ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ಅಲ್ಲ, ಸಿಬಿಐ ತನಿಖೆ ಆಗಬೇಕು. ಇಲ್ಲವಾದಲ್ಲಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಇನ್ನೂ ನೀಡಿಲ್ಲ ಯಾಕೆ – ಕಾಂಗ್ರೆಸ್‌ಗೆ ಬಿಜೆಪಿ ಪ್ರಶ್ನೆ

ಸಿದ್ದರಾಮಯ್ಯ (Siddaramaiah)  ಬಾದಾಮಿ ಗೆಲ್ಲಲು ನಾನು ಕಾರಣ. ಬಾದಾಮಿ ಚುನಾವಣೆಯಲ್ಲಿ ನಾನು ಹೋಂವರ್ಕ್ ಮಾಡಿದ್ದು, ಸಿದ್ದರಾಮಯ್ಯ ಅಲ್ಲ. ನಾನು ಅವರನ್ನು ಗೆಲ್ಲಿಸಿದೆ ಅದಕ್ಕೆ ಅವರ ಸರಿಯಾದ ಉಪಕಾರ ಮಾಡಿದ್ರು. ಸಿದ್ದರಾಮಯ್ಯ ಕೋಲಾರದಲ್ಲಿ ನಿಲ್ಲಲ್ಲ. ಮನೇ ದೇವರು ಹೇಳಿದ್ದಾರೆ ಅವರು ಬರಲ್ಲ. ಆದ್ರೆ ಸಿದ್ದರಾಮಯ್ಯ ಬಲವಂತಕ್ಕೆ ಕೋಲಾರಕ್ಕೆ ಬರುತ್ತಿದ್ದಾರೆ. ಕೊನೆಗೆ ಹೈಕಮಾಂಡ್ ಮೇಲೆ ಹಾಕುತ್ತಿದ್ದಾರೆ. ಸಿದ್ದರಾಮಯ್ಯರನ್ನು ಸೋಲಿಸಲು ಕೋಲಾರಕ್ಕೆ ಕರೆದುಕೊಂಡು ಕೆಲವರು ಬರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಏಕಕಾಲಕ್ಕೆ 72 ಕ್ಷೇತ್ರ ನಿರ್ವಹಿಸುವ ರಿಮೋಟ್ ಮತಯಂತ್ರ ಪ್ರದರ್ಶನ

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ರಾಜ್ಯದಲ್ಲಿ 123 ಸೀಟ್ ಬರುವುದು ಖಚಿತ. ಈ ಬಾರಿ ನಾವೇ ಅಧಿಕಾರಕ್ಕೆ ಬರುತ್ತೇವೆ ನಾವೇ ಅಧಿಕಾರ ಮಾಡುವುದು. ನಮ್ಮ ಪಕ್ಷದವರು ಸೇರಿ ಸಿಎಂ ಕುಮಾರಸ್ವಾಮಿ (H.D Kumaraswamy)  ಎಂದು ಹೇಳುತ್ತೇವೆ. ಆದ್ರೆ ಕಾಂಗ್ರೆಸ್, ಬಿಜೆಪಿಯಲ್ಲಿ ಹಾಗಿಲ್ಲ, ನೀವು ಹೇಳಿ ನೋಡಿ ನೋಡೋಣ ಎಂದು ಕಾಂಗ್ರೆಸ್ ಹಾಗೂ ಬಿಜೆಪಿಗೆ ಸವಾಲು ಹಾಕಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *