ಸುಮಲತಾ ಚಿತ್ತ ಯಾರತ್ತ? – ಬಿಜೆಪಿಯಿಂದ ಪದೇ ಪದೇ ಆಹ್ವಾನ ಏಕೆ?

Public TV
2 Min Read

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಸುಮಲತಾ (Sumalatha) ಮೇಲೆ ಬಿಜೆಪಿ (BJP) ಕಣ್ಣು ಬಿದ್ದಿದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪೊಲಿಟಿಕಲ್ ಲಾಸ್ಟ್ ಗೇಮ್ ಶುರು ಆಗಿದೆ.

ಆ ಎರಡು ಕ್ಷೇತ್ರಗಳನ್ನ ಸುಮಲತಾಗಾಗಿ ಇಟ್ಟುಕೊಂಡು ಕಾದು ನೋಡುವ ತಂತ್ರದ ಮೊರೆ ಹೋಗ್ತಿದೆ ಬಿಜೆಪಿ. ಆ ಕಾರಣಕ್ಕಾಗಿಯೇ ಸುಮಲತಾ ಚಿತ್ತ ಯಾವ ಕಡೆ? ಜೆಡಿಎಸ್ (JDS) ಗೇಮ್ ನೋಡಿ ಹೆಜ್ಜೆ ಇಡ್ತಾರಾ ಅನ್ನೋ ಕುತೂಹಲ ಇದೆ. ಇದನ್ನೂ ಓದಿ: ಗುಜರಾತ್ ಸಕ್ಸಸ್: ಹುಬ್ಬಳ್ಳಿಯಲ್ಲಿ ಮೋದಿ ಶೋ ಸ್ಯಾಂಪಲ್ ಅಷ್ಟೇ – ಕರ್ನಾಟಕದಲ್ಲಿ ಮುಂದಿದೆ ಮೆಗಾ ಹವಾ

ಬಿಜೆಪಿ ಪಕ್ಷಕ್ಕೆ ಬನ್ನಿ ಸುಮಲತಾ ಅವರೇ ಅಂತಾ ಬಿಜೆಪಿ ನಾಯಕರಿಂದ ಕೊಡುತ್ತಿರುವ ಆಹ್ವಾನ ನಿಂತಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಈಗಾಗಲೇ ಅಂಬರೀಶ್ (Ambareesh) ಶಿಷ್ಯರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಸುಮಲತಾ ಅವರತ್ತ ಚಿತ್ತ ನೆಟ್ಟಿದೆ. ಈ ಹಿಂದೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರೇ ಸುಮಲತಾಗೆ ಆಹ್ವಾನ ಕೊಟ್ಟಿದ್ದರು. ಬಿಜೆಪಿ ಸೇರ್ಪಡೆ ಬಗ್ಗೆ ಎರಡ್ಮೂರು ಬಾರಿ ಆಹ್ವಾನ ನೀಡಿದ್ದರೂ ಸುಮಲತಾ ಯಾವುದೇ ನಿರ್ಧಾರ ತಿಳಿಸಿಲ್ಲ.

ಸುಮಲತಾ ಬರುವುದಾದ್ರೆ ಮಂಡ್ಯ, ಮದ್ದೂರು ಜಿಲ್ಲೆಗಳನ್ನು ಮೀಸಲಿಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಮಂಡ್ಯ, ಮದ್ದೂರು ಎರಡು ಕ್ಷೇತ್ರಗಳನ್ನ ಗೆಲ್ಲಿಸಿಕೊಂಡು ಬರಲಿ ಎಂಬುದು ಬಿಜೆಪಿ ಟಾಸ್ಕ್. ಈಗಾಗಲೇ ಡಿಕೆಶಿ ನಡೆಯ ಬಗ್ಗೆ ಸಂಸದೆ ಸುಮಲತಾ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹೆಚ್‌ಡಿಕೆ ಕುಟುಂಬದ ಜೊತೆಯೇ ಲೋಕಸಭೆಯಲ್ಲಿ ಫೈಟ್ ಮಾಡಿದ್ದಾರೆ. ಹಾಗಾಗಿ ಸುಮಲತಾಗೆ ಇರುವ ದಾರಿ ಒಂದೇ ಎನ್ನಲಾಗ್ತಿದೆ. ಇದನ್ನೂ ಓದಿ: ಒಂದೇ ಕಡೆ ನಿಂತ್ರೆ ಬಲವಿಲ್ಲ; ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು – ಸಿದ್ದುಗೆ ರಾಜಕೀಯ ಭವಿಷ್ಯ ನುಡಿದ ಮನೆ ದೇವರು

ಬಿಜೆಪಿ ಬಗ್ಗೆ ಸಾಫ್ಟ್ ಆಗಿ ಮಾತಾನಾಡಿರುವ ಸುಮಲತಾ ನಡೆಯ ಬಗ್ಗೆಯೇ ಎಲ್ಲರ ಚಿತ್ತ ಇದೆ. ಈ ಹಿಂದೆ ಸಿಎಂ, ಅಶೋಕ್, ಯೋಗೇಶ್ವರ್ ಎಲ್ಲರೂ ಸುಮಲತಾಗೆ ಆಹ್ವಾನ ಕೊಟ್ಟಿದ್ದರು. ನಿನ್ನೆ ಮತ್ತೆ ಸಚಿವ ಅಶ್ವಥ್‌ ನಾರಾಯಣ್ ಬಿಜೆಪಿಗೆ ಬನ್ನಿ ಎಂದು ಆಹ್ವಾನ ಕೊಟ್ಟಿದ್ದಾರೆ. ಹಾಗಾದ್ರೆ ಸಂಕ್ರಾಂತಿ ಬಳಿಕ ಸುಮಲತಾ ನಿರ್ಧಾರ ಹೊರಬೀಳುತ್ತಾ? ಹೈಕಮಾಂಡ್ ಮಟ್ಟದಲ್ಲೇ ಮಾತುಕತೆನಾ ಎಂಬ ಪ್ರಶ್ನೆಗಳು ಮೂಡಿದ್ದು, ಉತ್ತರಕ್ಕಾಗಿ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *