ಬಿಜೆಪಿಯಿಂದ ಜಾತಿ ಸಮೀಕರಣ ವ್ಯೂಹ – ಮಠಯಾತ್ರೆ ಶುರು ಮಾಡಿದ ಬಿಜೆಪಿ ಅಧ್ಯಕ್ಷ ನಡ್ಡಾ

By
1 Min Read

ಬೆಂಗಳೂರು: ಎಲೆಕ್ಷನ್ ಸಮೀಪಿಸುತ್ತಿರುವಂತೆಯೇ ಬಿಜೆಪಿಯ ಹೈಕಮಾಂಡ್ ನಾಯಕರು ಮೇಲಿಂದ ಮೇಲೆ ದಂಡಯಾತ್ರೆ ಆರಂಭಿಸಿದ್ದಾರೆ. ಮೋದಿ, ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಪಿ ನಡ್ಡಾ ವಿಶೇಷವಾಗಿ ಪ್ರಮುಖವಾಗಿ ನಾಲ್ಕು ಸಮುದಾಯಗಳನ್ನು ಟಾರ್ಗೆಟ್ ಮಾಡಿಕೊಂಡು ಮಠಯಾತ್ರೆ ನಡೆಸುತ್ತಿದ್ದಾರೆ.

ಪ್ರವಾಸದ ಮೊದಲ ದಿನವಾದ ಗುರುವಾರ ತುಮಕೂರಿನ ಸಿದ್ದಗಂಗಾ ಮಠ, ಚಿತ್ರದುರ್ಗದ ಮಾದಾರ ಚನ್ನಯ್ಯ ಮಠ, ಸಿರಿಗೆರೆಯ ತರಳಬಾಳು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಭೇಟಿ ಮಧ್ಯೆ ಪಕ್ಷದ ಶಕ್ತಿ ಕೇಂದ್ರಗಳ ಪ್ರಮುಖರ ಜೊತೆ, ಎಸ್‍ಸಿ, ಎಸ್‍ಟಿ, ಓಬಿಸಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಯಾರೇ ಬಂದ್ರು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‍ನ್ನು ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ

ಶಾಸಕರು, ಸಂಸದರ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸದ್ಯ ದಾವಣಗೆರೆಯಲ್ಲಿ ಬೀಡುಬಿಟ್ಟಿರುವ ಜೆಪಿ ನಡ್ಡಾ ಶುಕ್ರವಾರ ಹರಿಹರ ಪಂಚಮಸಾಲಿ ಪೀಠ, ಬೆಳ್ಳೋಡಿಯ ಕನಕಗುರುಪೀಠ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠವನ್ನು ಸಂದರ್ಶಿಸಲಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಬಿಜೆಪಿ ಜಾತಿ ಸಮೀಕರಣದ ರಾಜಕಾರಣವನ್ನು ಶುರು ಮಾಡಿಕೊಂಡಿರುವುದು ಇಲ್ಲಿ ಗೊತ್ತಾಗುತ್ತಿದೆ.

ಬಿಜೆಪಿ ಪ್ಲ್ಯಾನ್‌ ಏನು?
ಕಳೆದ ವಾರ ಹಳೆ ಮೈಸೂರು ಭಾಗಕ್ಕೆ ಬಂದಿದ್ದ ಅಮಿತ್ ಶಾ ಒಕ್ಕಲಿಗ, ಲಿಂಗಾಯತ ಕಾಂಬಿನೇಷನ್ ಬಗ್ಗೆ ಶಾ ತಂತ್ರ ಹೂಡಿ ಆದಿಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟಿದ್ದರು. ಈಗ ಜೆಪಿ ನಡ್ಡಾ ಅವರು 6 ಮಠ ಯಾತ್ರೆ ಕೈಗೊಂಡಿದ್ದಾರೆ. ಈ ಮೂಲಕ ಲಿಂಗಾಯಿತ, ಮಾದಿಗ, ಕುರುಬ, ವಾಲ್ಮೀಕಿ ಮತ ಬ್ಯಾಂಕ್‍ಗೆ ಲಗ್ಗೆ ಇಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *