ಕಾಂತಾರ 2 ಸಿನಿಮಾ ಬಗ್ಗೆ ಸುಳಿವು ನೀಡಿದ ನಿರ್ಮಾಪಕ ವಿಜಯ್ ಕಿರಗಂದೂರು

By
1 Min Read

ಈ ವರ್ಷದ ಸೂಪರ್ ಹಿಟ್ ‘ಕಾಂತರ’ ಸಿನಿಮಾ ಸಿಕ್ವಲ್ ಆಗತ್ತಾ, ಇಲ್ಲವಾ ಅನ್ನುವ ಗೊಂದಲವಿತ್ತು. ಮೊನ್ನೆಯಷ್ಟೇ ರಿಷಬ್ ಶೆಟ್ಟಿ ಅವರು ಕಾಂತಾರ 2 ಬಗ್ಗೆ ಸದ್ಯಕ್ಕೆ ಏನೂ ಯೋಚನೆ ಮಾಡಿಲ್ಲ ಎಂದು ಹೇಳಿಕೊಂಡಿದ್ದರು. ಈ ಗೊಂದಲವನ್ನು ಸ್ವತಃ ನಿರ್ಮಾಪಕ ವಿಜಯ್ ಕಿರಗಂದೂರು ಬಗೆಹರಿಸಿದ್ದಾರೆ. ಸದ್ಯದಲ್ಲೇ ಕಾಂತಾರ 2 ಸಿನಿಮಾ ಮಾಡದೇ ಇದ್ದರೂ, ಮಾಡುವುದು ನಿಜ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ಅವರು ಬೇರೊಂದು ಕೆಲಸದಲ್ಲಿ ಬ್ಯುಸಿ ಆಗಿರುವುದರಿಂದ ಕಾಂತಾರ 2 ಸಿನಿಮಾದ ಕೆಲಸ ತಡವಾಗಬಹುದು. ಈ ಸಿನಿಮಾ ಸಿಕ್ವಲ್ ಮಾಡಬೇಕಾ? ಅಥವಾ ಪ್ರೀಕ್ವಲ್ ಮಾಡಬೇಕಾ ಎನ್ನುವ ಯೋಚನೆ ಮಾಡುತ್ತಿದ್ದೇವೆ. ಆದರೆ, ಸಿನಿಮಾ ಎರಡನೇ ಭಾಗ ಬರುವುದು ಪಕ್ಕಾ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲಿಗೆ ಕಾಂತಾರ 2 ಸಿನಿಮಾ ಬರುವುದು ಖಾತರಿಪಡಿಸಿದ್ದಾರೆ. ಇದನ್ನೂ ಓದಿ: `ತೂತು ಮಡಿಕೆ’ ನಂತರ ಮತ್ತೆ ಆ್ಯಕ್ಷನ್ ಕಟ್ ಹೇಳೋಕೆ ಚಂದ್ರ ಕೀರ್ತಿ ರೆಡಿ

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಈ ವರ್ಷದಲ್ಲಿ ಭಾರೀ ಸದ್ದು ಮಾಡಿತ್ತು. ದೇಶಾದ್ಯಂತ ಭರ್ಜರಿ ಗೆಲುವು ಪಡೆದಿತ್ತು. ನಾನಾ ಭಾಷೆಯ ಸಿನಿಮಾ ಗಣ್ಯರು ಈ ಚಿತ್ರದ ಬಗ್ಗೆ ಮೆಚ್ಚಿ ಮಾತನಾಡಿದ್ದರು. ಹಾಗಾಗಿ ಕಾಂತಾರ 2 ಸಿನಿಮಾದ ಬಗ್ಗೆ ಅಭಿಮಾನಿಗಳು ಆಗ್ರಹಿಸಿದ್ದರು. ಈ ಕುರಿತು ದೈವವನ್ನೂ ಕೇಳಲಾಗಿತ್ತು. ದೈವವೂ ಕೂಡ ಅನುಮತಿ ಕೊಟ್ಟಿದ್ದರಿಂದ ಸಿನಿಮಾ ಬರುವುದು ಪಕ್ಕಾ ಆಗಿದೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಿಂದ ಮೂಡಿ ಬಂದಿರುವ ಕಾಂತರ ಸಿನಿಮಾ, ಇದೀಗ ಆಸ್ಕರ್ ಅಂಗಳವನ್ನೂ ಮುಟ್ಟಿದೆ. ಆಸ್ಕರ್ ಪ್ರಶಸ್ತಿಯ ರೇಸ್ ನಲ್ಲಿಯೂ ಇದೆ. ಜೊತೆಗೆ ಭಾರತದ ಆರ್.ಆರ್.ಆರ್  ರೀತಿಯ ಚಿತ್ರಗಳನ್ನು ಆಸ್ಕರ್ ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ ಬರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *