ಮನೆಬಾಗಿಲು ತಟ್ಟಿದ್ರೂ ತಲೆಕೆಡಿಸಿಕೊಳ್ಳದ ವೈದ್ಯೆ- ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ 9ರ ಬಾಲಕಿ ದುರ್ಮರಣ!

Public TV
1 Min Read

ಚಿತ್ರದುರ್ಗ: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ರು. ಇದೀಗ ಮತ್ತೆ 9 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ತೀವ್ರ ಉಸಿರಾಟದ ತೊಂದ್ರೆಯಿಂದ ತಡರಾತ್ರಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಚಳ್ಳಕೆರೆ ತಾಲೂಕಿನ ರೇಖಲಗೆರೆ ಗ್ರಾಮದ ಐಶ್ವರ್ಯಳನ್ನ ಕರೆದುಕೊಂಡು ಬರಲಾಗಿತ್ತು. ತುರ್ತು ಚಿಕಿತ್ಸಾ ಘಟಕದಲ್ಲಿದ್ದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಮಹಿಳಾ ವೈದ್ಯೆ ಸರೋಜ ಅವರ ಬಳಿ ಕಳುಹಿಸಿದ್ದಾರೆ.

ಮನೆಯಲ್ಲಿ ನಿದ್ದೆ ಮಾಡುತ್ತಾ ಇದ್ದ ಡಾ. ಸರೋಜ ಅವರ ಮನೆಯ ಬಾಗಿಲು ತಟ್ಟಿದ್ದಾರೆ. ಆದ್ರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ಡಾ. ಸರೋಜ ಆಸ್ಪತ್ರೆ ಕಡೆ ತಲೆಹಾಕಿಲ್ಲ. ಸುಮಾರು ಒಂದು ಗಂಟೆ ನಂತ್ರ ಮತ್ತೆ ಆಸ್ಪತ್ರೆಯ ಸಿಬ್ಬಂದಿ ಹೋಗಿ ವೈದ್ಯರನ್ನ ಮನೆಯಿಂದ ಕರೆದುಕೊಂಡು ಬಂದಿದ್ದಾರೆ.

ಆದ್ರೆ ದುರಾದೃಷ್ಟವಶಾತ್ ಐಶ್ವರ್ಯಾಳ ಉಸಿರು ನಿಂತು ಹೋಗಿತ್ತು. ಇದೀಗ ಮಗಳ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತಾ ಪೋಷಕರು ಆರೋಪಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *