ಇವತ್ತು ಸ್ಯಾಂಡಲ್‍ವುಡ್‍ ನಲ್ಲಿ ಒಂದಲ್ಲ, ಎರಡಲ್ಲ 9 ಸಿನಿಮಾ ರಿಲೀಸ್

Public TV
1 Min Read

ಬೆಂಗಳೂರು: ಇಂದು ಚಂದನವನದಲ್ಲಿ ಬರೋಬ್ಬರಿ 9 ಚಲನಚಿತ್ರಗಳು ಬಿಡುಗಡೆಯಾಗಲಿವೆ. ಯಾವ ಸಿನಿಮಾ ನೋಡೋದು ಅನ್ನೋ ಚಿಂತೆ ಪ್ರೇಕ್ಷಕರಲ್ಲಿ ಶುರುವಾಗಿದೆ.

`ಕೆಂಪಿರ್ವೆ’, `ಕಾವೇರಿ ತೀರದ ಚಂದ್ರು’, `ನನ್ ಮಗಳೇ ಹೀರೋಯಿನ್’ `ಉಪೇಂದ್ರ ಮತ್ತೆ ಬಾ’, `ಮಹಾನುಭಾವರು’, `ಪಾನಿಪುರಿ’, `ಆಕಾಶ ಚಂದ್ರು ಸೂರ್ಯ ಭೂಮಿ’, `9 ಹಿಲ್ಟನ್ ಹೌಸ್’ ಸಿನಿಮಾಗಳು ಇಂದು ತೆರೆ ಕಾಣುತ್ತಿವೆ. ಇವುಗಳ ಜೊತೆ ಡಾ.ರಾಜ್ ಅವರ ‘ದಾರಿ ತಪ್ಪದ ಮಗ’ ಚಿತ್ರ ರೀ ರಿಲೀಸ್ ಆಗುತ್ತಿದೆ.

`ಉಪೇಂದ್ರ ಮತ್ತೆ ಬಾ’, `ಮಹಾನುಭಾವರು’, `ಪಾನಿಪುರಿ’, ಈ ಮೂರು ಸಿನಿಮಾಗಳು ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾಗಳು. `ಮುಕುಂದ ಮುರಾರಿ’ ಸಿನಿಮಾದ ನಂತರ ರಿಯಲ್ ಸ್ಟಾರ್ ಉಪೇಂದ್ರ ಪ್ರಜಾಕಾರಣದಲ್ಲಿ ಮುಳುಗೋಗಿದ್ದರು. ಸಿನಿಮಾಗಳಿಗಿಂತ ಹೊಸ ಪಕ್ಷ ವಿಚಾರದಲ್ಲಿಯೇ ಸುದ್ದಿಯಾಗಿದ್ದರು. ಆದರೆ ಮತ್ತೆ ತಮ್ಮ ಡಿಫರೆಂಟ್ ಸಿನಿಮಾದ ಮೂಲಕ ಸದ್ದು ಮಾಡಲು ಬರುತ್ತಿದ್ದಾರೆ. ಉಪೇಂದ್ರ ಮತ್ತೆ ಬಾ ಇಂತಿ ನಿನ್ನ ಪ್ರೇಮ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ.

ಎಚ್2ಓ ಚಿತ್ರವನ್ನ ನಿರ್ದೇಶಿಸಿ ಮಾಯವಾಗಿದ್ದ ಅರುಣ್ ಲೋಕ್‍ನಾಥ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಶೃತಿ ಹರಿಹರನ್ ಉಪ್ಪಿ ಜೊತೆಗೆ ಡ್ಯುಯೆಟ್ ಹಾಡಿದ್ದಾರೆ. ಉಪೇಂದ್ರ ಸಿನಿಮಾದ ಬಳಿಕ ನಟಿ ಪ್ರೇಮ ಮತ್ತೆ ಉಪ್ಪಿ ಜೊತೆ ಬಣ್ಣ ಹಚ್ಚಿದ್ದಾರೆ. ಹೀಗಾಗಿ ಸಿನಿಮಾ ಸಾಕಷ್ಟು ಹವಾ ಸೃಷ್ಟಿಸಿದೆ.

ಮತ್ತೊಂದು `ಪಾನಿಪುರಿ’ ಸಿನಿಮಾ. ಹೊಸಬರ ತಂಡದಿಂದ ಚಿತ್ರ ಮೂಡಿಬಂದಿದ್ದು, ಥ್ರಿಲ್ಲರ್ ಜೊತೆ ಕಾಮಿಡಿ ಕಥಾಹಂದರವಿದೆ. ಆರು ಜನ ಸ್ನೇಹಿತರು ಟ್ರೆಕ್ಕಿಂಗ್‍ಗೆ ಹೋದಾಗ ಏನೇನು ಆಗುತ್ತದೆ ಅನ್ನೊದೇ ಈ ಚಿತ್ರದ ಅಂತರಾಳವಾಗಿದೆ.

ಹಾರರ್ ಕಮ್ ಥ್ರಿಲ್ಲರ್ ಸಿನಿಮಾಗಳ ಜೊತೆ ಲವ್ ಕಮ್ ಫ್ಯಾಮಿಲಿ ಎಂಟರ್‍ಟೈನರ್ ಸಿನಿಮಾ `ಮಹಾನುಭಾವರು’ ಕೂಡ ತೆರೆ ಕಾಣುತ್ತಿದೆ. `ಮಹಾನುಭಾವರು’ ಯಾರಪ್ಪ ಅಂದ್ರೆ ಬಾಲಚಂದರ್ ಮತ್ತು ಗೋಕುಲ್ ರಾಜ್. ಇಬ್ಬರೂ ಹೊಸಬರು, ಹೊಸ ಕನಸುಗಳನ್ನು ಕಟ್ಟಿಕೊಂಡು ಗಂಧದಗುಡಿಗೆ ಬಂದಿರುವವರು. ಸಂದೀಪ್ ನಾಗಲೀಕರ್ ಈ ಚಿತ್ರದ ಸೂತ್ರಧಾರರಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *