ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಇಂದಿಗೆ (ಆ.15) 79 ವರ್ಷ. ಈ ಹಿನ್ನೆಲೆ ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ (PM Modi) ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮೂಲಕ ದಾಖಲೆಯ ನಿರ್ಮಿಸಲಿದ್ದು, 12ನೇ ಬಾರಿಗೆ ಧ್ವಜಾರೋಹಣ ಮಾಡಲಿದ್ದಾರೆ.
ಬೆಳಿಗ್ಗೆ 7:30ಕ್ಕೆ ಧ್ವಜಾರೋಹಣ ಮಾಡಿ, ಬಳಿಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಧ್ವಜಾರೋಹಣದ ಮಾಡಿ ರಾಷ್ಟ್ರಗೀತೆ ಬಳಿಕ 21 ಗನ್ ಸೆಲ್ಯೂಟ್ ಮೂಲಕ ಗೌರವ ವಂದಿಸಲಾಗುತ್ತದೆ. ಆನಂತರ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳಿಂದ ಪುಷ್ಪವೃಷ್ಠಿ ಮಾಡಲಾಗುತ್ತದೆ. ಇನ್ನೂ ಈ ವರ್ಷದ ಥೀಮ್ “ನಯಾ ಭಾರತ” ಆಗಿದ್ದು, ದೇಶದ ಸಾಂಸ್ಕೃತಿಕ ವೈವಿಧ್ಯತೆ, ಸೇನಾ ಸಾಮರ್ಥ್ಯ, ಮತ್ತು ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸಲಾಗುವುದು. ಸುಮಾರು 6,000 ವಿಶೇಷ ಅತಿಥಿಗಳು, ಯುವಕರು, ರೈತರು, ಮಹಿಳೆಯರು, ಮತ್ತು ಸರ್ಕಾರಿ ಯೋಜನೆಗಳ ಫಲಾನುಭವಿಗಳು ಕಾರ್ಯಕ್ರಮವನ್ನು ವೀಕ್ಷಿಸಲಿದ್ದಾರೆ.ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಗೆ ಸ್ಪೆಷಲ್ ಎಳ್ಳುಂಡೆ
ಕೆಂಪು ಕೋಟೆಗೆ ಭದ್ರತೆ:
* ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 10,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
* ವೇದಿಕೆ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಹಂತದಲ್ಲಿ ಭದ್ರತೆ ಇರಲಿದೆ, ಪ್ರಧಾನಿ ಸುತ್ತ ಎಸ್ಪಿಜಿ ಕಾವಲು ಕಾಯಲಿದೆ
* 1,000 ಮುಖ ಗುರುತಿಸುವ ಕ್ಯಾಮೆರಾಗಳು, ಆಧುನಿಕ ತಪಾಸಣೆ ಉಪಕರಣಗಳು, ಅಅಖಿಗಿ, ಮತ್ತು ಫೇಸ್ ಡಿಟೆಕ್ಷನ್ ತಂತ್ರಜ್ಞಾನವನ್ನು ನಿಯೋಜಿಸಲಾಗಿದೆ
* ಗುಪ್ತಚರ ಮಾಹಿತಿಯ ಆಧಾರದ ಮೇಲೆ ದೆಹಲಿ ಮತ್ತು ಓಅಖ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ
* 70 Pಅಖ ವಾಹನಗಳು, ಗಸ್ತು ವಾಹನಗಳು, ಮತ್ತು ತುರ್ತು ರಕ್ಷಣಾ ಘಟಕದ ವಾಹನಗಳನ್ನು ಕೆಂಪು ಕೋಟೆಯ ಸುತ್ತಲೂ ನಿಯೋಜಿಸಲಾಗಿದೆ
* ಆಂಟಿ-ಡ್ರೋನ್ ಸಿಸ್ಟಮ್ನಂತಹ ಆಧುನಿಕ ತಂತ್ರಜ್ಞಾನವನ್ನು ಭದ್ರತೆಗಾಗಿ ಬಳಸಲಾಗುತ್ತಿದೆ.
ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆಪರೇಷನ್ ಸಿಂಧೂರ್ನ ಪ್ರತಿಬಿಂಬ:
1. ಗ್ಯಾನ್ಪಥ್ನಲ್ಲಿ ಲಾಂಛನ ಪ್ರದರ್ಶನ: ಕೆಂಪು ಕೋಟೆಯ ಗ್ಯಾನ್ಪಥ್ನ ವೀಕ್ಷಣಾ ಕೇಂದ್ರದಲ್ಲಿ ಆಪರೇಷನ್ ಸಿಂಧೂರ್ನ ಲಾಂಛನವನ್ನು ಪ್ರಮುಖವಾಗಿ ಪ್ರದರ್ಶಿಸಲಾಗುವುದು. ಇದರ ಜೊತೆಗೆ, ಸ್ಥಳದ ಹೂವಿನ ಅಲಂಕಾರವೂ ಈ ಕಾರ್ಯಾಚರಣೆಯ ಥೀಮ್ಗೆ ತಕ್ಕಂತೆ ರೂಪಿಸಲಾಗಿದೆ.
2. ಆಮಂತ್ರಣ ಪತ್ರಿಕೆಗಳಲ್ಲಿ ಲಾಂಛನ: ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಆಮಂತ್ರಣ ಪತ್ರಿಕೆಗಳ ಮೇಲೆ ಆಪರೇಷನ್ ಸಿಂಧೂರ್ನ ಲಾಂಛನವನ್ನು ಮುದ್ರಿಸಲಾಗಿದೆ. ಜೊತೆಗೆ, ಕೇಂದ್ರ ವಿಸ್ತಾರದ ಚಿತ್ರದ ಬದಲಿಗೆ ಚಿನಾಬ್ ರೈಲ್ವೇ ಸೇತುವೆಯ ಚಿತ್ರವನ್ನು ಒಳಗೊಂಡಿದೆ, ಇದನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.
3. ವಿಶೇಷ ಗೌರವ ಸಮಾರಂಭ: ಆಪರೇಷನ್ ಸಿಂಧೂರ್ನಲ್ಲಿ ಭಾಗವಹಿಸಿದ 15 ರಕ್ಷಣಾ ಸಿಬ್ಬಂದಿಯನ್ನು ಕೆಂಪು ಕೋಟೆಯ ರಾಂಪ್ನಲ್ಲಿ ಗೌರವಿಸಲಾಗುವುದು. ಅವರಿಗೆ ಗೌರವ ಪದಕಗಳನ್ನು ಘೋಷಿಸಲಾಗುವುದು, ಇದು ಈ ಕಾರ್ಯಾಚರಣೆಯ ಯಶಸ್ಸಿಗೆ ಸಮರ್ಪಿತವಾಗಿದೆ.
4. ಏರ್ಫೋರ್ಸ್ನ ವಿಶೇಷ ಪ್ರದರ್ಶನ: ಭಾರತೀಯ ವಾಯುಪಡೆಯ ಮೂರು ಹೆಲಿಕಾಪ್ಟರ್ಗಳು ಕೆಂಪು ಕೋಟೆಯ ಮೇಲೆ ಆಪರೇಷನ್ ಸಿಂಧೂರ್ನ ಧ್ವಜವನ್ನು ಹಾರಿಸುವ ಮೂಲಕ ವಿಶೇಷ ಫ್ಲೈಪಾಸ್ಟ್ ನಡೆಸಲಿವೆ. ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಹಾರಿಸಿದರೆ, ಇನ್ನೊಂದು ಆಪರೇಷನ್ ಸಿಂಧೂರ್ನ ಧ್ವಜವನ್ನು ಹಾರಿಸಲಿದೆ.
ವಿವಿಧ ಕ್ಷೇತ್ರಗಳಿಂದ ಸುಮಾರು 5,000 ವಿಶೇಷ ಅತಿಥಿಗಳಿಗೆ ಆಹ್ವಾನ:
1. ಒಲಿಂಪಿಕ್ಸ್ 2025ರ ಭಾರತೀಯ ತಂಡ
2. ಅಂತರರಾಷ್ಟ್ರೀಯ ಕ್ರೀಡಾ ಕೂಟಗಳ ವಿಜೇತರು
3. ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ನ ಚಿನ್ನದ ಪದಕ ವಿಜೇತರು
4. ರಾಷ್ಟ್ರೀಯ ಜೇನುಗೂಡು ಮತ್ತು ಜೇನು ಮಿಷನ್ನಡಿಯಲ್ಲಿ ತರಬೇತಿ ಪಡೆದ ಮತ್ತು ಆರ್ಥಿಕ ಸಹಾಯ ಪಡೆದ ಉತ್ತಮ ಕೃಷಿಕರು
5. ಔಷಧೀಯ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ ಮತ್ತು ಸುಸ್ಥಿರ ನಿರ್ವಹಣೆ ಯೋಜನೆಯಡಿ ಉತ್ತಮ ಕೃಷಿಕರು
6. ಇ-ನೆಗೋಶಿಯೇಬಲ್ ವೇರ್ಹೌಸ್ ರಿಸೀಟ್ಗಾಗಿ ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಸಾಲ ಪಡೆದ ಉತ್ತಮ ಕೃಷಿಕ ವ್ಯಾಪಾರಿಗಳು/ಸಹಕಾರಿ ಸಂಸ್ಥೆಗಳು
7. ಓಪನ್ ಡಿಫಿಕೇಷನ್ ಫ್ರೀ ಪ್ಲಸ್ ಗ್ರಾಮಗಳ ಉತ್ತಮ ಸರಪಂಚ್ಗಳು
8. ಕ್ಯಾಚ್ ದಿ ರೈನ್ ಅಭಿಯಾನದ ಉತ್ತಮ ಸರಪಂಚ್ಗಳು
9. ಪಿಎಂ ಯುವಾ (ಯೂತ್ ಆಥರ್ ಮೆಂಟರ್ಶಿಪ್ ಯೋಜನೆ) ಯಡಿ ಉತ್ತಮ ಯುವ ಲೇಖಕರು
10. ಪಿಎಂ-ವಿಕಾಸ್ ಯೋಜನೆಯಡಿ ಕೌಶಲ್ಯ ತರಬೇತಿ ಪಡೆದ ಉತ್ತಮ ಯುವಕರು
11. ಟ್ರೈಫೆಡ್ನ ಪಿಎಂ ವನ್ ಧನ್ ಯೋಜನೆಯಡಿ ಉತ್ತಮ ಉದ್ಯಮಿಗಳು
12. ರಾಷ್ಟ್ರೀಯ ಎಸ್ಸಿ/ಎಸ್ಟಿ ಹಬ್ ಯೋಜನೆಯಡಿ ಎಸ್ಸಿ/ಎಸ್ಟಿ ಸಮುದಾಯದ ಉತ್ತಮ ಉದ್ಯಮಿಗಳು
13. ಪಿಎಂ-ದಕ್ಷ, ಶ್ರೇಯಸ್ ಮತ್ತು ಶ್ರೇಷ್ಠ ಯೋಜನೆಯಡಿ ಉತ್ತಮ ವಿದ್ಯಾರ್ಥಿಗಳು
14. ವಿಶ್ವಾಸ್ ಯೋಜನೆಯಡಿ ಉತ್ತಮ ಸ್ವ-ಸಹಾಯ ಗುಂಪುಗಳು
15. ಎನ್ಎಸ್ಟಿಎಫ್ಡಿಸಿಯಿಂದ ಉತ್ತಮ ಉದ್ಯಮಿಗಳು
16. ಉತ್ತಮ ಪಿಎಸಿಎಸ್ (ಪ್ರಾಥಮಿಕ ಕೃಷಿ ಸಾಲ ಸೊಸೈಟಿಗಳು)
17. ಪಿಎಂ ಇಂಟರ್ನ್ಶಿಪ್ ಯೋಜನೆಯ ಉತ್ತಮ ಇಂಟರ್ನ್ಗಳು
18. ಮೈ ಭಾರತ್ ಸ್ವಯಂಸೇವಕರಲ್ಲಿ ಉತ್ತಮರು
19. ಪಿಎಂ ಆವಾಸ್ ಯೋಜನೆ ಗ್ರಾಮೀಣದ ಫಲಾನುಭವಿಗಳು
20. ಆನ್ಲೈನ್/ಆಫ್ಲೈನ್ ಕ್ವಿಜ್/ಸ್ಪರ್ಧೆಗಳಲ್ಲಿ ವಿಜೇತರಾದ ದೆಹಲಿಯ ಶಾಲಾ ಮಕ್ಕಳು
21. ಸ್ವಚ್ಛತಾ ಅಭಿಯಾನದ 50 ಉತ್ತಮ ಸ್ವಚ್ಛತಾ ಕಾರ್ಯಕರ್ತರು
22. ಲಖಪತಿ ದೀದಿ ಯೋಜನೆಯ ಫಲಾನುಭವಿಗಳು
23. ಆಂಗನವಾಡಿ ಕಾರ್ಯಕರ್ತರು/ಸಹಾಯಕರು, ಮೇಲ್ವಿಚಾರಕರು, ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳು, ಮಕ್ಕಳ ಕಾಳಜಿ ಸಂಸ್ಥೆಗಳು, ಮಿಷನ್ ಶಕ್ತಿ
24. ಪುನರ್ವಸತಿ ಪಡೆದ ಬಂಧಿತ ಕಾರ್ಮಿಕರು, ರಕ್ಷಣೆ ಮತ್ತು ಪುನರ್ವಸತಿ ಪಡೆದ ಮಹಿಳೆಯರು ಮತ್ತು ಮಕ್ಕಳು
25. ಅಂತರರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಿದ ಸ್ವಯಂಸೇವಕರು/ಶಿಕ್ಷಕರು
26. ಕೇಂದ್ರ/ರಾಜ್ಯ ಸಾಮಾಜಿಕ ಕಲ್ಯಾಣ ಯೋಜನೆಗಳನ್ನು ಸಂಪೂರ್ಣವಾಗಿ ತಲುಪಿಸಿದ ಸರಪಂಚ್ಗಳು/ಗ್ರಾಮೀಣ ನಾಯಕರು
27. ವೈಬ್ರಂಟ್ ವಿಲೇಜಸ್ನಿಂದ ಅತಿಥಿಗಳು
28. ಕಳೆದ ಒಂದು ವರ್ಷದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ನಡಿ ಸ್ವ-ಸಹಾಯ ಗುಂಪುಗಳು
29. ಇನ್ನೋವೇಶನ್ಸ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ನಿಂದ ಆವಿಷ್ಕಾರಕರು/ಉದ್ಯಮಿಗಳು
30. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸ್ಥಳೀಯ ಸಮುದಾಯದ ಗಿರಿಜನ ಮಕ್ಕಳು
ಇದರ ಜೊತೆಗೆ, ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ 1,500ಕ್ಕೂ ಹೆಚ್ಚು ಜನರು ಸಾಂಪ್ರದಾಯಿಕ ಉಡುಗೆಯಲ್ಲಿ ಈ ಭವ್ಯ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿತರಾಗಿದ್ದಾರೆ.ಇದನ್ನೂ ಓದಿ: