ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ 7 ಜನರ ಮೇಲೆ ಮಾರಣಾಂತಿಕ ಹಲ್ಲೆ

Public TV
1 Min Read

ಕಲಬುರಗಿ: ಜಾತ್ರೆಯಲ್ಲಿ ಪಕ್ಕಕ್ಕೆ ಸರಿ ಅಂತ ಹೇಳಿದ್ದಕ್ಕೆ ಒಂದೇ ಕುಟುಂಬದ ಏಳು ಜನರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಜಿಲ್ಲೆಯ ಹತಗುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಹಾದೇವಪ್ಪ ಕುಟುಂಬದ ಏಳು ಜನ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ರೌಡಿಶೀಟರ್ ರಾಜು ಕಪನೂರ ಮತ್ತು ಅವನ ತಂಡದವರು ಹಲ್ಲೆ ಮಾಡಿದ್ದಾರೆ ಅಂತ ಗಾಯಾಳುಗಳು ಆರೋಪಿಸಿದ್ದಾರೆ.

ಶುಕ್ರವಾರದಂದು ಗ್ರಾಮದ ಲಕ್ಷ್ಮಿದೇವರ ಜಾತ್ರೆಯ ಸಂದರ್ಭದಲ್ಲಿ ಮಹದೇವಪ್ಪ ಕುಟುಂಬ ಮತ್ತು ಗ್ರಾಮದ ನಾಮದೇವ ಲಂಡನಕರ್ ಕುಟುಂಬದ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಲಂಡನಕರ್ ಕುಟುಂಬದ ಪರವಾಗಿ ಕಲಬುರಗಿ ತಾಲೂಕಿನ ಕಪನೂರು ಗ್ರಾಮದ ನಿವಾಸಿಯಾದ ರೌಡಿಶೀಟರ್ ರಾಜು ಕಪನೂರ್ ಮತ್ತು ಗ್ಯಾಂಗ್ ಬಂದು ರಾಡ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಮಾತನಾಡಿದ ರಾಜು, ನಾನು ಜಾತ್ರೆಗೆ ಹೋಗಿದ್ದು ನಿಜ. ಆದ್ರೆ ನಾನು ಹಲ್ಲೆ ಮಾಡಿಲ್ಲ. ನನಗೆ ಆಗದವರು ಈ ರೀತಿಯ ಕುಮ್ಮಕ್ಕು ನೀಡ್ತಿದ್ದಾರೆ ಅಂತ ಹೇಳುತ್ತಿದ್ದಾನೆ.

ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *