ರಾಮನಗರ: ಸರ್ಕಾರಿ ಶಾಲೆಗೆ ನುಗ್ಗಿ ಕಪಾಟಿನಲ್ಲಿ ಹಾವು ಅವಿತುಕೊಂಡಿದ್ದು, ಶಾಲೆಯ ವಿದ್ಯಾರ್ಥಿಗಳು ಭಯಭೀತಗೊಂಡ ಘಟನೆ ರಾಮನಗರ ತಾಲೂಕಿನ ಕವಣಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನುಗ್ಗಿರುವ ಹಾವು ತರಗತಿ ಒಳಗೆ ಕಪಾಟಿನಲ್ಲಿ ಸೇರಿಕೊಂಡಿತ್ತು. ಬೆಳಗ್ಗೆ ಶಾಲೆಗೆ ಹೋದ ಮಕ್ಕಳಿಗೆ ಕೆಲ ಸಮಯದ ಬಳಿಕ ಹಾವು ಕಾಣಿಸಿಕೊಂಡಿದೆ. ನಂತರ ಭಯಬೀತರಾದ ವಿದ್ಯಾರ್ಥಿಗಳು ಶಾಲೆಯಿಂದ ಹೊರ ಓಡಿದ್ದಾರೆ.
ನಂತರ ಉರಗ ತಜ್ಞ ಅಮಾನ್ ಖಾನ್ ಸ್ಥಳಕ್ಕೆ ಭೇಟಿ ನೀಡಿ ಕಪಾಟಿನಲ್ಲಿ ಅವಿತಿದ್ದ ಹಾವನ್ನು ಸೆರೆ ಹಿಡಿದ್ರು. ಏಳು ಅಡಿಗೂ ಉದ್ದದ ನಾಗರ ಹಾವನ್ನು ಕಂಡು ಗ್ರಾಮಸ್ಥರಲ್ಲದೇ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಆಶ್ಚರ್ಯಗೊಂಡಿದ್ದರು.
ಸಾಮಾನ್ಯವಾಗಿ 5 ಅಡಿಯಿರುತ್ತೆ, ಆದ್ರೆ ಈ ಹಾವು ಸುಮಾರು ಏಳೂವರೆ ಅಡಿ ಇತ್ತು. ಹಾವನ್ನು ಸೆರೆ ಹಿಡಿದ ನಂತರ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ ಅಂತ ಶಾಲಾ ಶಿಕ್ಷಕರು ತಿಳಿಸಿದ್ದಾರೆ.
ಹಾವನ್ನು ಸೆರೆ ಹಿಡಿದ ಉರಗತಜ್ಞ ಅಮಾನ್ ಖಾನ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದು, ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.