7 ತಿಂಗಳ ಹೆಣ್ಣು ಮಗುವನ್ನು ಬಕೆಟ್‍ ನೀರಿನಲ್ಲಿ ಮುಳುಗಿಸಿ ಕೊಂದ ವಕೀಲ

Public TV
1 Min Read

ಚಿಕ್ಕಮಗಳೂರು: ಹೆಣ್ಣು ಮಗು ಎಂದು ಏಳು ತಿಂಗಳ ಮಗುವನ್ನು ಅಪ್ಪನೇ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಂದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದೆ.

ಉಮಾಶಂಕರ್ ಮಗುವನ್ನ ಕೊಂದ ಅಪ್ಪನಾಗಿದ್ದು, ಈತ ವಕೀಲನಾಗಿದ್ದು, ಮೂರು ವರ್ಷಗಳ ಹಿಂದೆ ಕಡೂರು ನ್ಯಾಯಾಲಯದಲ್ಲಿ ಡಿ ದರ್ಜೆ ನೌಕರಳಾಗಿರೋ ಮಂಜುಳ ಎಂಬಾಕೆಯನ್ನು ಪ್ರೀತಿಸಿ ಎರಡನೇ ಮದುವೆಯಾಗಿದ್ದನು. ಮಂಜುಳಾಗೆ ಏಳು ತಿಂಗಳ ಹಿಂದೆ ಹೆಣ್ಣು ಮಗು ಹುಟ್ಟಿತ್ತು. ಆರಂಭದಿಂದಲೂ ಹೆಣ್ಣು ಮಗು ಎಂದು ಮಂಜುಳಾಗೆ ಮಾನಸಿಕ ಕಿರುಕುಳ ನೀಡುತ್ತಿದ್ದನು.

ಗುರುವಾರ ಮಂಜುಳ ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮಗುವನ್ನ ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಅಲ್ಲದೇ ತನಗೇನು ಗೊತ್ತಿಲ್ಲದಂತೆ ಇದ್ದ ಎಂದು ಆರೋಪಿಸಿರೋ ಮಗುವಿನ ತಾಯಿ ಮಂಜುಳ ಕಡೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಕಡೂರು ಪೊಲೀಸರು ಆರೋಪಿ ಉಮಾಶಂಕರ್ ನನ್ನ ಬಂಧಿಸಿದ್ದಾರೆ.

ಬಂಧಿತ ಉಮಾಶಂಕರ್ ನ ಮೊದಲ ಹೆಂಡತಿಗೆ ಗಂಡು ಮಗುವಿದ್ದು, ವಿಚ್ಛೇದನವನ್ನೂ ಪಡೆದಿರಲಿಲ್ಲ. ಎರಡನೇ ಹೆಂಡತಿಗೆ ಹೆಣ್ಣು ಮಗು ಆಯ್ತು, ಆಸ್ತಿ ಕೈ ತಪ್ಪಿ ಹೋಗುತ್ತೆಂದು ಏಳು ತಿಂಗಳ ಹೆಣ್ಣು ಮಗು ಲಾವಣ್ಯಳನ್ನ ಅಪ್ಪನೇ ಕೊಲೆ ಮಾಡಿದ್ದಾನೆಂಬ ಮಾಹಿತಿ ಪ್ರಾಥಮಿಕ ವರದಿಯಲ್ಲಿ ಲಭ್ಯವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *