ದಿವ್ಯಳನ್ನು ಬಿಗ್‍ ಮನೆಯಿಂದ ಕಳಿಸಿಕೊಡ್ಬೇಕು ಅಂತ ಮಂಜು ಹೇಳಿದ್ಯಾಕೆ..?

Public TV
1 Min Read

ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರ ಮೊದಲ ವೀಕೆಂಡ್ ಎಪಿಸೋಡ್ ಪ್ರಸಾರವಾಗಿದೆ. ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಎಂದಿನಂತೆ ತಮ್ಮ ಮಾತುಗಾರಿಕೆ, ಹಾಸ್ಯದಿಂದ ಮನೆಯ ಸದಸ್ಯರು ತಮ್ಮ ಮಾತಿಗೆ ತಲೆದೂಗುವಂತೆ ಮಾಡಿದರು. ಅಂತೆಯೇ ಸುದೀಪ್ ಅವರು ಎಲ್ಲರ ಬಳಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಹೇಳಿದರು.

ಹೌದು. ಬಿಗ್ ಮನೆಯಲ್ಲಿ ಅತ್ಯಂತ ಉತ್ಸಾಹದಿಂದ ಮನೆಮಂದಿಯನ್ನು ನಗಿಸುವ ಲ್ಯಾಗ್ ಮಂಜು ಬಳಿ ಮನೆಯ ಸದಸ್ಯರ ಯಾವ ಒಂದು ವಿಚಾರ ಒಳ್ಳೆಯದಿದೆ ಹಾಗೂ ಈ ಒಂದು ವಿಚಾರದಿಂದ ಅವರಿಂದ ದೂರ ಇರಬೇಕು ಎಂಬುದನ್ನು ತಿಳಿಸುವಂತೆ ಹೇಳುತ್ತಾರೆ. ಅಲ್ಲದೆ ಕಿಚ್ಚ ಅವರು ಒಬ್ಬೊಬ್ಬರ ಹೆಸರನ್ನು ಹೇಳುತ್ತಾ ಬಂದರು. ದಿವ್ಯ ಉರುಗುಡ ಹೆಸರು ಹೇಳುತ್ತಿದ್ದಂತೆಯೇ ಮಂಜು ಆಕೆಯಿಂದ ಇದೇ ವಿಚಾರಕ್ಕೆ ಹುಷಾರಾಗಿರಬೇಕು ಎಂದರು.

ಸ್ಪೋರ್ಟ್, ಟಾಸ್ಕ್ ಅಂತ ಬಂದಾಗ ದಿವ್ಯ ಯಾರನ್ನೂ ಲೆಕ್ಕಕ್ಕೆ ತಗೊಳಲ್ಲ. ರಾಕ್ಷಸಿಯಂತೆ ಒಬ್ಬಳೇ ಸಿಕ್ಕಾಪಟ್ಟೆ ಫೈಟ್ ಮಾಡ್ತಾಳೆ. ಇದು ನನಗೆ ತುಂಬಾ ಒಳ್ಳೆಯ ವಿಚಾರ ಅಂದ್ರು.

ಇನ್ನು ತುಂಬಾ ಹುಷಾರಾಗಿರಬೇಕಾದ ವಿಚಾರ ಅಂದ್ರೆ ಫಸ್ಟ್ ಅವಳನ್ನು ಇಲ್ಲಿಂದ ಕಳಿಸಬೇಕು ಅನ್ನೋದಾಗಿದೆ ಅಂದ್ರು. ಲ್ಯಾಗ್ ಮಂಜು ಹೀಗೆ ಹೇಳ್ತಿದ್ದಂದೆ ಕಿಚ್ಚ ಸೇರಿದಂತೆ ಮನೆ ಮಂದಿಯೆಲ್ಲಾ ಜೋರಾಗಿ ನಕ್ಕರು. ಇತ್ತ ಮಂಜು ಹೀಗೆ ಹೇಳ್ತಿದ್ದಂತೆ ದಿವ್ಯ ಅವರು ಮಂಜು…… ಅಂತ ನಗುವಿನ ಜೊತೆ ಸಿಟ್ಟು ಹೊರಹಾಕಿದ ಪ್ರಸಂಗವೂ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *