ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

Public TV
1 Min Read

ಹೈದರಾಬಾದ್: ಗಣೇಶ ಹಬ್ಬ (Ganesha Festival) ಮುಗಿದ ಬಳಿಕವೂ ಶ್ರೀಗಣಪತಿ ದೇವಸ್ಥಾನಗಳಲ್ಲಿ (Laksmi Ganapathy) ಪ್ರಸಾದಕ್ಕೆ (Prasad) ಭಾರೀ ಬೇಡಿಕೆ ಶುರುವಾಗಿದೆ. ನೆಚ್ಚಿನ ವಿಘ್ನೇಶ್ವರನಿಗಾಗಿ ಸಿದ್ಧಪಡಿಸಿದ ನೈವೇದ್ಯ ಪ್ರಸಾದ ದಾಖಲೆಯ ಹರಾಜಿಗೆ ಮಾರಾಟವಾಗುತ್ತಿವೆ. ಹಾಗೆಯೇ ಇಲ್ಲಿನ ಗೇಟೆಡ್ ಸಮುದಾಯವಾದ ರಿಚ್ಮಂಡ್ ವಿಲ್ಲಾಸನ್ ಸಿಟಿಯಲ್ಲಿ 10 ರಿಂದ 12 ಕೆಜಿ ತೂಕದ ಲಡ್ಡು (Ladoo) ಬರೋಬ್ಬರಿ 60.8 ಲಕ್ಷ ರೂ.ಗೆ ಹರಾಜಾಗಿದೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಳಾಪುರದ ಗಣೇಶ ದೇವಸ್ಥಾನದಲ್ಲಿ 24.60 ಲಕ್ಷಕ್ಕೆ ಲಡ್ಡು ಹರಾಜಾಗಿತ್ತು. ನಿನ್ನೆಯೂ ಸಹ ಇದೇ ಶ್ರೀಲಕ್ಷ್ಮೀ ಗಣಪತಿ (Laksmi Ganapathy) ದೇವಸ್ಥಾನದಲ್ಲಿ (Temple) 12 ಕೆಜಿ ಲಡ್ಡು 45 ಲಕ್ಷ ರೂ.ಗಳಿಗೆ ಹರಾಜಾಗಿತ್ತು. ಇಂದು ಅಷ್ಟೇ ತೂಕದ ಲಡ್ಡು ಬರೋಬ್ಬರಿ 60.8 ಲಕ್ಷಕ್ಕೆ ಹರಾಜಾಗಿ ದಾಖಲೆ ನಿರ್ಮಿಸಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಗೆದ್ದರೆ ಮನೆ ಬಾಗಿಲಿಗೇ RTO ಸೇವೆ – ಕೇಜ್ರಿವಾಲ್

ಹಿಂದೂ, ಮುಸ್ಲಿಂ, ಕ್ರೈಸ್ತರು ಹಾಗೂ ಸಿಖ್ಖರು ಸೇರಿದಂತೆ ಸುಮಾರು 100 ಮಂದಿ ಒಟ್ಟಾಗಿ ಸೇರಿ ಶ್ರೀ ಲಕ್ಷ್ಮೀ ಗಣಪತಿ ಉತ್ಸವ ಪಂಗಡದ ಗಣೇಶ ಲಡ್ಡು ಪ್ರಸಾದವನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.

ಗಣೇಶನಿಗೆ ಮಾಡಿದ ಲಡ್ಡೂಗಳನ್ನು ಪ್ರಸಾದವಾಗಿ ಹರಾಜು ಹಾಕುವುದು ಇಲ್ಲಿನ ಸಂಪ್ರದಾಯವಾಗಿದೆ. ಅಲ್ಲದೇ ಲಡ್ಡು ಪಡೆದವರು ದೇವರ ವಿಶೇಷ ಆಶೀರ್ವಾದಕ್ಕೆ ಪಾತ್ರರಾಗಿರುತ್ತಾರೆ ಎಂದು ನಂಬಲಾಗಿದೆ. ಲಡ್ಡು ಅವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನೂ ಶ್ರೀಗಣೇಶ ಕರುಣಿಸುತ್ತಾರೆ ಎಂದು ಜನರ ನಂಬಿಕೆಯಾಗಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್‌ ಪೂಜಾ ಸ್ಥಳಗಳ ಕಾಯ್ದೆಯ ವ್ಯಾಪ್ತಿಗೆ ಒಳಪಡಲ್ಲ: ವಾರಣಾಸಿ ಕೋರ್ಟ್‌ ಹೇಳಿದ್ದೇನು?

ಹರಾಜಿನಿಂದ ಬಂದ ಹಣವನ್ನು ದೇವಾಲಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *