ಸಂತೋಷ್ ಆನಂದ್ ರಾಮ್ ಮತ್ತು ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್ ನಲ್ಲಿ 5ನೇ ಸಿನಿಮಾ

Public TV
1 Min Read

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಈಗಾಗಲೇ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ ಸಂತೋಷ್ ಆನಂದ್ ರಾಮ್. ನಾಲ್ಕನೇ ಸಿನಿಮಾ ಕೂಡ ಇದೇ ಬ್ಯಾನರ್ ನಲ್ಲೇ ಸೆಟ್ಟೇರಲಿ. ಈ ಸಿನಿಮಾ ಇನ್ನೂ ಚಿತ್ರೀಕರಣವನ್ನೇ ಪ್ರಾರಂಭಿಸಿಲ್ಲ. ಆಗಲೇ ಸಂತೋಷ್ ಆನಂದ್ ರಾಮ್ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಹೇಳಿದ್ದಾರೆ. ಈ ಸರ್ ಪ್ರೈಸ್ ವಿಷಯವನ್ನು ಸ್ವತಃ ಸಂತೋಷ್ ಆನಂದ್ ರಾವ್ ಅವರೇ ಹಂಚಿಕೊಂಡಿದ್ದಾರೆ.

ಮೊನ್ನೆಯಷ್ಟೇ ಸಂತೋಷ್ ಆನಂದ್ ರಾಮ್ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ವಿಜಯ್ ಕಿರಗಂದೂರು ಅವರು ಈ ಗಿಫ್ಟ್ ಅನ್ನು ಸಂತೋಷ್ ಅವರಿಗೆ ನೀಡಿದ್ದಾರಂತೆ. ಹಾಗಾಗಿ ಸಂತೋಷ್ ಆನಂದ್ ರಾವ್ ಮತ್ತು ಹೊಂಬಾಳೆ ಕಾಂಬಿನೇಷನ್ ನಲ್ಲಿ 5ನೇ ಸಿನಿಮಾ ಕೂಡ ಮೂಡಿ ಬರಲಿದೆ. ಸತತವಾಗಿ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಐದು ಚಿತ್ರಗಳನ್ನು ಮಾಡಿದ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಸಂತೋಷ್ ಆನಂದ್ ರಾಮ್ ಕಾರಣರಾಗಲಿದ್ದಾರೆ.  ಇದನ್ನೂ ಓದಿ:ಸಿನಿಮಾ ಸೋಲಿಗೆ ಪನ್ನಿರಿಗೆ ಕಟ್ಟುತ್ತಿರುವ ಜಿ.ಎಸ್.ಟಿ ಕಾರಣ: ನಿರ್ದೇಶಕ ಅನುರಾಗ್ ಕಶ್ಯಪ್

ಹೊಂಬಾಳೆ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಬಂದ ಮೊದಲ ಸಿನಿಮಾ ‘ರಾಜಕುಮಾರ್’. ಪುನೀತ್ ರಾಜ್ ಕುಮಾರ್ ಈ ಸಿನಿಮಾದ ನಾಯಕರು. ಬಾಕ್ಸ್ ಆಫೀಸಿನಲ್ಲಿ ದಾಖಲೆ ಬರೆದ ಚಿತ್ರವಿದು. ಹಾಗಾಗಿ ಇದೇ ಕಾಂಬಿನೇಷನ್ ನಲ್ಲಿ ಯುವರತ್ನ ಚಿತ್ರ ಮಾಡಿದರು. ನಂತರ ಬಂದಿದ್ದು ಜಗ್ಗೇಶ್ ಗಾಗಿ ಮಾಡಿದ ‘ರಾಘವೇಂದ್ರ ಸ್ಟೋರ್ಸ್’ ಚಿತ್ರ. ಇದು ಇನ್ನೂ ತೆರೆ ಕಾಣಬೇಕು. ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಗಾಗಿ ಸಂತೋಷ್ ಒಂದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದು ಇನ್ನೂ ಸೆಟ್ಟೇರಬೇಕು. ಇದಾದ ನಂತರ ಮತ್ತೊಂದು ಸಿನಿಮಾ ಸಂತೋಷ್ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಶಿವರಾಜ್ ಕುಮಾರ್ ಹೀರೋ ಎನ್ನಲಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *