ಒಬ್ಬರ ಹಿಂದೆ ಒಬ್ಬರಂತೆ ಐವರು ತರಬೇತಿ ಪಿಎಸ್‍ಐಗಳು ಕುಸಿದು ಬಿದ್ರು

Public TV
1 Min Read

ಕಲಬುರಗಿ: ನಿರ್ಗಮನ ಪಥ ಸಂಚಲನದಲ್ಲಿ ಐದು ಜನ ತರಬೇತಿ ಪಿಎಸ್‍ಐ ಅಸ್ವಸ್ಥಗೊಂಡು ಕುಸಿದು ಬಿದ್ದಿರುವ ಘಟನೆ ಕಲಬುರಗಿಯ ನಾಗನಹಳ್ಳಿ ತರಬೇತಿ ಕೇಂದ್ರದಲ್ಲಿ ನಡೆದಿದೆ.

ನಾಗನಹಳ್ಳಿಯಲ್ಲಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮನ ನಡೆಯುತ್ತಿತ್ತು. ಈ ವೇಳೆ ಗೃಹ ಸಚಿವ ಎಂಬಿ ಪಾಟೀಲ್ ಭಾಷಣದ ಮಧ್ಯೆಯೇ ಒಬ್ಬರ ಹಿಂದೆ ಒಬ್ಬರು ಐವರು ತರಬೇತಿ ಪಿಎಸ್‍ಐ ಕುಸಿದು ಬಿದ್ದಿದ್ದಾರೆ.

ಸಚಿವರಿಗಾಗಿ ಸುಮಾರು ಬೆಳಗ್ಗೆ 7 ಗಂಟೆಯಿಂದ ಬಿಸಿಲಿನಲ್ಲಿ ತರಬೇತಿ ಪಿಎಸ್‍ಐಗಳು ಕಾದು ನಿಂತಿದ್ದರು. ಆದರೆ ಬೆಳಗ್ಗೆ 8 ಗಂಟೆಗೆ ಬರಬೇಕಾದ ಗೃಹ ಸಚಿವರು ಒಂದೂವರೆ ಗಂಟೆ ತಡವಾಗಿ ಸುಮಾರು 9.30ಕ್ಕೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಲಿನಲ್ಲೇ ನಿಂತಿದ್ದರಿಂದ ಸುಸ್ತಾಗಿ ಬಿದ್ದಿದ್ದಾರೆ. ಸುಮಾರು 267 ಪಿಎಸ್‍ಐಗಳು ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ನೀರು, ಆಹಾರವಿಲ್ಲದೇ ಕಾಯುತ್ತಿದ್ದರು.

ಇತ್ತ ತರಬೇತಿ ಪಿಎಸ್‍ಐಗಳು ಕುಸಿದು ಬೀಳುತ್ತಿದ್ದರೂ ಕೂಡ ಗೃಹ ಸಚಿವರು ಭಾಷಣವನ್ನು ಮುಂದುವರಿಸಿದ್ದರು. ಇದರಿಂದ ಅಲ್ಲಿದ್ದ ಜನರು ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಶಿಕ್ಷಣಾರ್ಥಿ ಅಸ್ವಸ್ಥಗೊಂಡರು ಭಾಷಣ ಮಾಡುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಮಾನವಿಯತೆ ಮರೆತರಾ ಎಂಬ ಪ್ರಶ್ನೆ ಮೂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *