ಕಾರಿನಲ್ಲಿಟ್ಟಿದ್ದ 40 ಲಕ್ಷ ರೂ. ಎಗರಿಸಿ ಪರಾರಿಯಾದ ಖದೀಮರು

Public TV
1 Min Read

ತುಮಕೂರು: ಕಾರಿನಲ್ಲಿಟ್ಟಿದ್ದ 40 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿನ ಎದುರೇ ಕಳ್ಳರು ಎಗಿರಿಸಿ ಪರಾರಿಯಾದ ಘಟನೆ ಶಿರಾ ಪಟ್ಟಣದ ಎಸ್.ಬಿ.ಐ ಬ್ಯಾಂಕ್ ಬಳಿ ನಡೆದಿದೆ.

ಆಂಧ್ರ ಪ್ರಗತಿ ಬ್ಯಾಂಕ್‍ನ ರೊಳ್ಳೆ ಮತ್ತು ಪೆದ್ದಮಂತೂರಿನ ಶಾಖೆಯ ವ್ಯವಸ್ಥಾಪಕರು ಶಿರಾ ಎಸ್‍ಬಿಐ ಬ್ಯಾಂಕಿನಿಂದ ಹಣ ತೆಗೆದುಕೊಂಡು ಹೋಗಲು ಇಂದು ಬಂದಿದ್ದರು. ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೂರು ಬ್ಯಾಗಲ್ಲಿ ತುಂಬಿಸಿಕೊಂಡು ಬ್ಯಾಂಕಿನಿಂದ ಹೊರ ಬಂದು ಕಾರಿನಲ್ಲಿಟ್ಟಿದ್ದರು.

ಈ ಹಂತದಲ್ಲಿ ವ್ಯವಸ್ಥಾಪಕರು ಬಂದಿದ್ದ ಕಾರು ಪಂಚರ್ ಆಗಿರುವುದು ಕಂಡು ಬಂದಿತ್ತು. ಟಯರ್ ಬದಲಾಯಿಸಿಕೊಳ್ಳುತಿದ್ದಾಗ ಗಮನ ಬೇರೆಡೆ ಇದ್ದ ಸಂದರ್ಭದಲ್ಲಿ ಹಣ ಇಟ್ಟಿದ್ದ ಮೂರು ಬ್ಯಾಗ್‍ಗಳಲ್ಲಿ ಒಂದನ್ನು ತೆಗೆದುಕೊಂಡು ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಳೆದು ಹೋದ ಬ್ಯಾಗ್‍ನಲ್ಲಿ 40 ಲಕ್ಷ ರೂಪಾಯಿ ಇತ್ತು ಎಂಬ ಮಾಹಿತಿ ಲಭಿಸಿದ್ದು, ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶಲನೆ ನಡೆಸಿದ್ದು, ಬ್ಯಾಗ್ ಎಗರಿಸಿದ ಕಳ್ಳರಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *