ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ದುರ್ಮರಣ

Public TV
1 Min Read

ಬೆಳಗಾವಿ: ಬುಧವಾರ ಸುರಿದಿದ್ದ ಮಳೆ, ಗಾಳಿಗೆ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಸೇರಿ ಎರಡು ಎತ್ತುಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ರೇವಪ್ಪ ಕಲ್ಲೋಳಿ(35), ಪತ್ನಿ ರತ್ನವ್ವ ಕಲ್ಲೋಳಿ(30), ಮಗ ಸಚಿನ್ (8), ರೇವಪ್ಪರ ಅಣ್ಣನ ಮಗ ಕೃಷ್ಣ ಮೃತ ದುರ್ದೈವಿಗಳು. ಬುಧವಾರ ಸಂಜೆ ಮಳೆ-ಗಾಳಿಗೆ ರೇವಪ್ಪ ಅವರ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರಿಂದ ಈ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ತಂತಿ ತೆರವುಗೊಳಿಸುವಂತೆ ಕೇಳಿದರು ಕ್ಯಾರೆ ಎಂದಿರಲಿಲ್ಲ. ಹೀಗಾಗಿ ಇಂದು ಬೆಳಗಿನ ಜಾವ ಕುಟುಂಬ ಸಮೇತ ಎರಡು ಎತ್ತಿನ ಜೊತೆ ಜಮೀನಿಗೆ ಹೋಗುತ್ತಿದ್ದ ದಂಪತಿ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಸಾವನ್ನಪ್ಪಿದ್ದಾರೆ.

ಇಷ್ಟೆಲ್ಲ ನಡೆದಿದ್ದರು ಘಟನಾ ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಮಾತ್ರ ಇದುವರೆಗೂ ಬಂದಿಲ್ಲ. ಆದಷ್ಟು ಬೇಗ ಬಂದು ತುಂಡಾದ ತಂತಿಗಳನ್ನು ತೆರೆವುಗೊಳಿಸಬೇಕು ಅಂತ ಸ್ಥಳೀಯರು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಸದ್ಯ ಈ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *