30 ಜಮುನಾಪೂರಿ ಮೇಕೆ, ಕುದುರೆ ಖರೀದಿ ಮಾಡಿದ ನಟ ದರ್ಶನ್

Public TV
1 Min Read

– ಧಾರವಾಡಕ್ಕೆ ಬಂದ ಕಾರಣ ತಿಳಿಸಿದ ದಾಸ

ಧಾರವಾಡ: ನಟ ದರ್ಶನ್ ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಇಂದು ಧಾರವಾಡಕ್ಕೆ ಆಗಮಿಸಿರುವ ದರ್ಶನ್, ಮಾಜಿ ಸಚಿವ ವಿನಯ್ ಕುಲಕರ್ಣಿ ಡೈರಿಗೆ ಭೇಟಿ ನೀಡಿದ್ದಾರೆ.

ವಿನಯ ಕುಲಕರ್ಣಿ ಅವರ ಬಳಿ 30 ಜಮುನಾಪೂರಿ ಮೇಕೆಯನ್ನು ಖರೀದಿ ಮಾಡಿರುವ ನಟ ದರ್ಶನ್, ನಾನು ಮೇಕೆ ಸಾಕಾಣಿಕೆ ಮಾಡುತ್ತಿರುವ ಹಿನ್ನೆಲೆ ಧಾರವಾಡಕ್ಕೆ ಮೇಕೆ ಖರೀದಿಗೆ ಬಂದಿದ್ದೇನೆ ಎಂದು ಹೇಳಿದರು. ಇವತ್ತು ಬೆಳಿಗ್ಗೆಯಿಂದ ಡೇರಿಯಲ್ಲೇ ಚಕ್ಕಡಿ ಓಡಿಸಿದ್ದ ದರ್ಶನ್, ನಾನು ಲ್ಯಾಂಬೊರ್ಗಿನಿ ಓಡಿಸೋಕು ರೇಡಿ, ಚಕ್ಕಡಿ ಓಡಿಸೋಕೂ ರೆಡಿ ಎಂದು ಹೇಳಿದರು.

ಈ ಮೊದಲು ಹಸುಗಳನ್ನು ಕೂಡಾ ಇಲ್ಲೇ ಖರೀದಿ ಮಾಡಿದ್ದೇನೆ ಎಂದ ದರ್ಶನ್, ವಿನಯ ಕುಲಕರ್ಣಿ ಬಳಿ ಎತ್ತುಗಳು ಚನ್ನಾಗಿವೆ ಎಂದು ಹೇಳಿದರು. ಇದೇ ವೇಳೆ ದರ್ಶನ್ ಬಗ್ಗೆ ಮಾತನಾಡಿದ ವಿನಯ್ ಕುಲಕರ್ಣಿ, ದರ್ಶನ್ ಮೊದಲಿನಿಂದಲೂ ಪ್ರಾಣಿ ಪ್ರಿಯ. ಮೊದಲು ಹಸುಗಳ ಹಾಲನ್ನು ಕೂಡಾ ಅವರು ಮನೆಗಳಿಗೆ ಕೊಟ್ಟಿದ್ದನ್ನು ನಾನು ನೋಡಿದ್ದೇನೆ ಎಂದು ದರ್ಶನ್ ಬಗ್ಗೆ ಹೊಗಳಿದ ವಿನಯ್ ಕುಲಕರ್ಣಿ, ಇವತ್ತು ನಾನು ದರ್ಶನ್ ಅವರಿಗೆ ಜೀವಂತ ಮೇಕೆಯನ್ನು ಪ್ರತಿ ಕೆಜಿಗೆ 400ರಂತೆ ಕೊಟ್ಟಿದ್ದೇನೆ ಎಂದು ಹೇಳಿದರು.

ದರ್ಶನ್ ಇದೇ ಡೈರಿಯಲ್ಲಿ ಒಂದು ಕುದುರೆಯನ್ನು ಕೂಡಾ ಖರೀದಿ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ. ನಟ ದರ್ಶನ್ ವಿನಯ್ ಡೈರಿಗೆ ಬಂದಿದ್ದಾರೆ ಎಂದು ತಿಳಿದ ಅಭಿಮಾನಿಗಳು ಸಾಲು ಸಾಲಾಗಿ ಬಂದು ಕಾದರು. ನಂತರ ದರ್ಶನ್ ಅವರನ್ನು ಭೇಟಿ ಮಾಡಿ ಸಂತಸಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *