ಸರ್ಕಾರಿ ಕಚೇರಿ ಆವರಣದಲ್ಲೇ 3 ಶ್ರೀಗಂಧ ಮರಗಳ ಕಳ್ಳತನ – ಅರಣ್ಯ ಇಲಾಖೆ ಕಚೇರಿ ಕೂಗಳತೆ ದೂರದಲ್ಲೇ ಕೃತ್ಯ!

Public TV
1 Min Read

ಧಾರವಾಡ: ಸರ್ಕಾರಿ ಕಚೇರಿ ಆವರಣದಲ್ಲೇ ಶ್ರೀಗಂಧದ ಮರಗಳನ್ನು (Sandalwood Trees) ಕಳ್ಳರು ಕಡಿದು ಸಾಗಿಸಿದ ಘಟನೆ ಧಾರವಾಡ (Dharwad) ನಗರದಲ್ಲಿ ನಡೆದಿದೆ.

ನಗರದ ಸರ್ವೆ ಕಚೇರಿ ಆವರಣದಲ್ಲಿದ್ದ ಮೂರು ಶ್ರೀಗಂಧ ಮರಗಳನ್ನು ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ. ರಾತ್ರಿ ವೇಳೆ ಕಳ್ಳರು ಈ ಕೆಲಸ ಮಾಡಿದ್ದಾರೆ. ಅರಣ್ಯ ಇಲಾಖೆ ಕಚೇರಿ (orest Department) ಕೂಗಳತೆಯಲ್ಲಿಯೇ ಸಿಟಿ ಸರ್ವೆ ಕಚೇರಿ ಇದೆ. ಇದನ್ನೂ ಓದಿ: ಕೊಲೆಗೂ ಮುಂಚೆ ಸೊಸೆಯ ರೇಪ್ – ಮಗನ ಜೊತೆಗೂಡಿ 10 ಅಡಿ ಗುಂಡಿಯಲ್ಲಿ ಶವ ಹೂತಿಟ್ಟ ಕಿಲಾಡಿ ಮಾವ

ಸುಮಾರು ಹತ್ತು ವರ್ಷದ ಮೂರು ಮರಗಳನ್ನು ಕತ್ತರಿಸಿಕೊಂಡು ಹೋಗಿರುವ ಕಳ್ಳರು, ಮರದ ಮಧ್ಯದಲ್ಲಿ ಇರುವ ಶ್ರೀಗಂಧ ಮಾತ್ರ ತೆಗೆದುಕೊಂಡು ಪರಾರಿಯಾಗಿದ್ದಾರೆ‌. ಸದ್ಯ ಉಪನಗರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ 5 ಹುಲಿಗಳ ದಾರುಣ ಸಾವು – ಸ್ಫೋಟಕ ರಹಸ್ಯ ಬಿಚ್ಚಿಟ್ಟ ಆ ಪತ್ರ

Share This Article