ಅನುಮತಿ ಪಡೆಯದೇ ರಜೆ – ರಾಜಭವನದ ಸಿಬ್ಬಂದಿ 6 ತಿಂಗಳು ಸಸ್ಪೆಂಡ್

Public TV
1 Min Read

ಬೆಂಗಳೂರು: ಅನುಮತಿ ಪಡೆಯದೇ ರಜೆ ಹಾಕಿ ಕರ್ತವ್ಯ ಲೋಪವೆಸಗಿದ ಹಿನ್ನಲೆಯಲ್ಲಿ ರಾಜಭವನದ ಮೂವರು ಪೊಲೀಸ್ ಸಿಬ್ಬಂದಿಯನ್ನು 6 ತಿಂಗಳು ಅಮಾನತು ಮಾಡಲಾಗಿದೆ.

ಕೆಎಸ್‍ಐಎಸ್‍ಎಫ್ ಪೇದೆಗಳಾದ ಹುಚ್ಚೇಗೌಡ, ತಿಮ್ಮಯ್ಯ, ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ರಾಜಭವನದಿಂದ ಯಾವುದೇ ಅನುಮತಿ ಪಡೆಯದೆ ಈ ಪೇದೆಗಳು ತಮ್ಮ ವರ್ಗಾವಣೆ ಸಂಬಂಧ ಐಎಸ್‍ಡಿ ಮೇಲಾಧಿಕಾರಿ ಭೇಟಿಗೆ ತೆರಳಿದ್ದರು. ಹೀಗಾಗಿ 1ನೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೆಂಟ್ ಮತ್ತು ಶಿಸ್ತು ಪ್ರಾಧಿಕಾರಿ ಎ. ನಾಗರಾಜ್ ಈ ಮೂವರನ್ನು ಅನಾನತು ಮಾಡಿ ಆದೇಶ ನೀಡಿದ್ದಾರೆ.

ಹಲವು ದಿನಗಳಿಂದ ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗಳು ವರ್ಗಾವಣೆಗಾಗಿ ಹೋಗಿದ್ದರು ಎನ್ನುವ ಕಾರಣ ನೀಡಿ ಅವರನ್ನ ಅಮಾನತು ಮಾಡಲಾಗಿದೆ. 6 ತಿಂಗಳ ಕಾಲ ಅಮಾನತು ಮಾಡಿ, ಈ ಬಗ್ಗೆ ತನಿಖೆಗೆ ಕಮಾಂಡೆಂಟ್ ನಾಗರಾಜ್ ಆದೇಶಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *