ಮಳೆಗೆ ಮನೆ ಗೋಡೆ ಕುಸಿದು ಮೂವರ ದುರ್ಮರಣ

Public TV
0 Min Read

ವಿಜಯಪುರ: ಮನೆಯ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಗರದ ರಾಮಮಂದಿರ ಬಳಿಯ ಮಠಪತಿ ಗಲ್ಲಿಯಲ್ಲಿ ನಡೆದಿದೆ.

ಅಶೋಕ ಗೌಡೆನ್ನವರ (40), ಶಕುಂತಲಾ ಗೌಡೆನ್ನವರ (30), ಚಂದ್ರಶೇಖರ ಗೌಡೆನ್ನವರ ಮೃತಪಟ್ಟ ದುರ್ದೈವಿಗಳು. ಕಳೆದ ಮೂರು ದಿನಗಳಿಂದ ನಿರಂತವಾಗಿ ಸುರಿಯುತ್ತಿರುವ ಮಳೆಗೆ ಅಶೋಕ ಅವರ ಮನೆ ಗೋಡೆ ಕುಸಿದಿದ್ದು, ಮನೆಯಲ್ಲಿ ಮಲಗಿದ್ದ 5 ಜನರಲ್ಲಿ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅದೃಷ್ಟವಷಾತ್ ಅಶೊಕ ಗೌಡೆನ್ನವರ ಚಿಕ್ಕಪ್ಪನ ಮಕ್ಕಳಾದ ರಂಜೀತ್ ಗೌಡೆನ್ನವರ(8) ಮತ್ತು ಅಜೀತ್ ಗೌಡೆನ್ನವರ (5) ಬದುಕುಳಿದಿದ್ದಾರೆ.

ಸ್ಥಳಕ್ಕೆ ಗಾಂಧಿಚೌಕ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *