ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

Public TV
1 Min Read

ಬಳ್ಳಾರಿ: ರವಿವಾರ ಸಂಜೆ ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.

ಸಂಡೂರು ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಮನೆಯಿಂದ ಮೂವರು ಬಾಲಕರು ಆಟವಾಡಲೆಂದು ಹೊರಹೋಗಿ ಕಾಣೆಯಾಗಿದ್ದರು. ಇಂದು ಗ್ರಾಮದ ಹೊರವಲಯದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಮಾರುತಿ (10), ಮಹ್ಮದ್ ಸುಭಾನಿ(7) ಮತ್ತು ಗುರುರಾಜ್(9) ಮೃತಪಟ್ಟ ಬಾಲಕರು. ಈ ಮೂವರು ಬಾಲಕರು ಕಾಣೆಯಾದ ಬಗ್ಗೆ ಕೂಡ್ಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು.  ಪೊಲೀಸರು ಬಾಲಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.

ಇಂದು ಮುಂಜಾನೆ ಮೂವರು ಬಾಲಕರ ಶವಗಳು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿವೆ. ಹೀಗಾಗಿ ಬಾಲಕರು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಗ್ರಾಮಸ್ಥರು ಮತ್ತು ಪೋಲೀಸರು ಶವಗಳನ್ನು ಕೆರೆಯಿಂದ ಹೊರತಗೆಯುವ ಕಾರ್ಯ ನಡೆಸುತ್ತಿದ್ದಾರೆ. ಮೂವರು ಬಾಲಕರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

 

 

 

 

Share This Article
Leave a Comment

Leave a Reply

Your email address will not be published. Required fields are marked *