ಇಂಧನ ಉಳಿತಾಯ ಮಾಡಿದ 27 ಮಂದಿ ಕೆಎಸ್‍ಆರ್‌ಟಿಸಿ ಸಿಬ್ಬಂದಿಗೆ ಪ್ರಶಸ್ತಿ

Public TV
1 Min Read

ಹಾವೇರಿ: ಕೋವಿಡ್ ನಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಇಂಧನ ಉಳಿತಾಯ ಮಾಡಿದ ಸಿಬ್ಬಂದಿ ಕೆಲಸ ಶ್ಲಾಘನೀಯವಾಗಿದೆ ಎಂದು ಉಪಾಧ್ಯಕ್ಷರಾದ ಡಾ. ಬಸವರಾಜ ಕೆಲಗಾರ ಅವರು ಹೇಳಿದರು.

ಮಂಗಳವಾರ ಹುಬ್ಬಳ್ಳಿ ಗೋಕುಲ ರಸ್ತೆಯ ನಗರ ಸಾರಿಗೆ ವಿಭಾಗದ ಸಭಾಂಗಣದಲ್ಲಿ ಘಟಕ ವ್ಯವಸ್ಥಾಪಕರುಗಳ ಮತ್ತು ಇಲಾಖೆ ಮುಖ್ಯಸ್ಥರ ಸಭೆಯಲ್ಲಿ ಅತೀ ಹೆಚ್ಚು ಇಂಧನ ಉಳಿತಾಯ ಮಾಡಿ ಕಾರ್ಯಕ್ಷಮತೆ ತೋರಿದ 27 ಅಧಿಕಾರಿಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ವ್ಹಿ ಎಸ್ ಪಾಟೀಲ್ ಅವರೊಂದಿಗೆ ಪ್ರಶಸ್ತಿ ಪ್ರಧಾನಮಾಡಿ ಅವರು ಮಾತನಾಡಿದರು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

ಕಾರ್ಯಕ್ರಮದಲ್ಲಿ ಮುಖ್ಯ ಸಂಚಾರ ವ್ಯವಸ್ಥಾಪಕರಾದ ರಾಜೇಶ ಹುದ್ದಾರ ಅವರು ಮಾತನಾಡಿ, ಪ್ರಯಾಣಿಕರೊಂದಿಗೆ ಸೌರ್ಜನ್ಯದಿಂದ ವರ್ತಿಸಿ, ಪ್ರಯಾಣಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ, ಬಸ್ ಮುಂಗಡ ಬುಕಿಂಗ್ ಆಸನಗಳ ಕುರಿತಂತೆ ಪ್ರಯಾಣಿಕರಿಗೆ ಸರಿಯಾದ ಜಾಗೃತಿ ಮೂಡಿಸಿ ಎಂದು ಹೇಳಿದರು.  ಇದನ್ನೂ ಓದಿ : ನಾನು ರಾಧಿಕಾ ಕುಮಾರಸ್ವಾಮಿ’.. ನಿಮ್ಮೊಂದಿಗೆ..

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಯಾಂತ್ರಿಕ ಅಭಿಯಂತರರಾದ ಎಚ್ ಎಮ್ ರಮೇಶ್ ಮಾತನಾಡಿ, ಪ್ರಸ್ತುತ ಸಾಲಿನ ಇಂಧನ ಉಳಿತಾಯ ಮಾಸಿಕದಲ್ಲಿ ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದಲ್ಲಿ ಒಟ್ಟು 2,18,585 ಲೀಟರ್‍ಗಳಷ್ಟು ಇಂಧನ ಉಳಿತಾಯ ಮಾಡಿ ರೂ. 1.80 ಕೋಟಿಗಳಷ್ಟು ಇಂಧನದ ವೆಚ್ಚವನ್ನು ಉಳಿತಾಯ ಮಾಡಲಾಗಿದೆ. ಇಂಧನ ಉಳಿತಾಯಕ್ಕೆ ಶ್ರಮಿಸಿದ ಎಲ್ಲ ಪ್ರಶಸ್ತಿ ಪುರಸ್ಕ್ರತ ಅಧಿಕಾರಿಗಳನ್ನು ಅಭಿನಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *