21ನೇ ಶತಮಾನ ಭಾರತ, ಚೀನಾಗೆ ಸೇರಿದ್ದು: ಪ್ರಧಾನಿ ಮೋದಿ

Public TV
1 Min Read

ನವದೆಹಲಿ: 21ನೇ ಶತಮಾನ ಏಷ್ಯಾಗೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ಅವರ ಚಿಕಾಗೋ ಭಾಷಣಕ್ಕೆ 125 ವರ್ಷ ಹಾಗೂ ದೀನ್ ದಯಾಳ್ ಉಪಾಧ್ಯಾಯ ಅವರ 100 ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮೋದಿ ಭಾಷಣ ಮಾಡಿದರು.

ಒಂದೇ ಏಷ್ಯಾ ಎಂದು ವಿವೇಕಾನಂದರು ಪ್ರಥಮ ಬಾರಿಗೆ ಹೇಳಿದ್ದರು. ಆದರೆ ಈಗ ಏಷ್ಯಾ ಎಷ್ಟು ಎತ್ತರಕ್ಕೆ ಬೆಳೆಯುತ್ತಿದೆ ಎನ್ನುವುದು ಪ್ರಪಂಚಕ್ಕೆ ತಿಳಿಯುತ್ತಿದೆ. ಅದು ಭಾರತವೇ ಆಗಿರಲಿ ಅಥವಾ ಚೀನಾವೇ ಆಗಿರಲಿ ಎಂದರು.

9/11 ದಿನ ಇಂದು ಬಹಳ ಪ್ರಸಿದ್ಧವಾಗಿದೆ. ಆದರೆ ಹೆಚ್ಚು ಪ್ರಚಾರದಕ್ಕೆ ಬಂದಿದ್ದು 2001ರ 9/11 ಘಟನೆಯಿಂದ. ಆದರೆ 1983 9/11ರಂದು ಸ್ವಾಮಿ ವಿವೇಕಾನಂದರ ಮಾಡಿರುವ ಭಾಷಣವನ್ನು ನಾವು ಈಗಲೂ ನೆನಪಿನಲ್ಲಿಟ್ಟುಕೊಂಡಿದ್ದೇವೆ. ಅಮೆರಿಕನ್ನರು 1983ರ 9/11ನ್ನು ಮರೆತ ಕಾರಣ 2001ರ 9/11 ಘಟನೆ ನಡೆಯಿತು ಎಂದು ಹೇಳಿದರು.

ಕಾಲೇಜುಗಳಲ್ಲಿ ರೋಸ್ ದಿನ ಆಚರಣೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ನಾನು ವಿರೋಧಿಸುವುದಿಲ್ಲ. ಆದರೆ ರೋಸ್ ದಿನ ಬದಲು ಆ ರಾಜ್ಯದ ಸಂಪ್ರದಾಯದಂತೆ ಕೇರಳ ದಿನ, ಸಿಕ್ ದಿನ, ಪಂಜಾಬ್ ದಿನ ಅಂತ ಆಚರಿಸಿ ಎಂದು ಪ್ರಧಾನಿ ಸಲಹೆ ನೀಡಿದರು.

ನಂತರ ಸ್ವಚ್ಛತೆ ಬಗ್ಗೆ ಮಾತನಾಡಿದ ಮೋದಿ, ಮೊದಲು ಶೌಚಾಲಯ ನಿರ್ಮಿಸಿ ನಂತರ ದೇವಾಲಯವನ್ನು ನಿರ್ಮಿಸಬೇಕು. ನಾನು ನನ್ನ ಆರೋಗ್ಯವನ್ನು ಸ್ವಚ್ಛತ ಕಾರ್ಮಿಕರಿಗೆ ಅರ್ಪಿಸುತ್ತೇನೆ ಹೊರತು ದುಬಾರಿ ಡಾಕ್ಟರ್ ಗಳಿಗೆ ಅಲ್ಲ ಎಂದರು.

ಸೋಲು ಇಲ್ಲದೇ ಗೆಲುವಿಲ್ಲ. ಆದರೆ ನಾವು ಸೋಲಿನಿಂದ ಭಯಪಡಬಾರದು. ಸ್ವಾಮಿ ವಿವೇಕಾನಂದರ ಪ್ರಕಾರ ಜ್ಞಾನ ಮತ್ತು ಕೌಶಲ್ಯಗಳೆರಡಕ್ಕೂ ಸಮವಾಗಿ ಮಹತ್ವವಿದೆ. ಜನರು ಯಾವಾಗಲೂ ಮಹಿಳೆಯರೇ ಮತ್ತು ಮಹನಿಯರೇ ಎಂದು ಸಂಬೋಧಿಸಿ ಭಾಷಣ ಮಾಡುತ್ತಾರೆ. ಆದರೆ ವಿವೇಕಾನಂದರು ಸಹೋದರ, ಸಹೋದರಿ ಎಂದು ಹೇಳಿ ತಮ್ಮ ಭಾಷಣವನ್ನು ಆರಂಭಿಸಿದ್ದರು. ಮಹಿಳೆಯರನ್ನೂ ಗೌರವಿಸೋರಿಗೆ ನನ್ನ ವಂದನೆಗಳು ಎಂದು ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *