ಕರ್ನಾಟಕದಲ್ಲಿ ಏ. 18, 23ಕ್ಕೆ ಚುನಾವಣೆ – ಮೇ 23ಕ್ಕೆ ಫಲಿತಾಂಶ ಪ್ರಕಟ

Public TV
3 Min Read

ನವದೆಹಲಿ: ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 11 ರಿಂದ ಆರಂಭವಾಗಿ ಮೇ 19 ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ 23 ರಂದು  ಫಲಿತಾಂಶ ಪ್ರಕಟವಾಗಲಿದೆ.

ಕಳೆದ ಬಾರಿ ಕರ್ನಾಟಕದಲ್ಲಿ ಒಂದು ಹಂತದಲ್ಲಿ ಚುನಾವಣೆ ನಡೆದಿದ್ದರೆ, ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.18 ಗುರುವಾರ ಮೊದಲ ಹಂತ ನಡೆದರೆ ಏ.23 ಮಂಗಳವಾರ ಎರಡನೇ ಹಂತದ ಚುನಾವಣೆ ನಡೆಯಲಿದೆ.

ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿ, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದರು. ಎಲ್ಲ ಬೂತ್‍ಗಳಲ್ಲಿ ವಿವಿಪ್ಯಾಟ್ ಇರಲಿದೆ. ಅಭ್ಯರ್ಥಿಗಳು ಪಾನ್ ಕಾರ್ಡ್ ನಂಬರನ್ನು ನಮೂದಿಸುವುದು ಆಯೋಗ ಕಡ್ಡಾಯಗೊಳಿಸಿದೆ.

ಮೊದಲ ಹಂತ ಚುನಾವಣೆ – ಏಪ್ರಿಲ್ 11
ಎರಡನೇ ಹಂತದ ಚುನಾವಣೆ – ಏಪ್ರಿಲ್ 18
ಮೂರನೇ ಹಂತದ ಚುನಾವಣೆ – ಏಪ್ರಿಲ್ 23
ನಾಲ್ಕನೇ ಹಂತದ ಚುನಾವಣೆ – ಏಪ್ರಿಲ್ 29
ಐದನೇ ಹಂತದ ಚುನಾವಣೆ – ಮೇ 6
ಆರನೇ ಹಂತದ ಚುನಾವಣೆ – ಮೇ 16
ಏಳನೇ ಹಂತಚ ಚುನಾವಣೆ – ಮೇ 19

ಇವಿಎಂ:
* ದೇಶಾದ್ಯಂತ 10 ಲಕ್ಷ ಮತಗಟ್ಟೆಗಳ ಸ್ಥಾಪನೆ
* ಎಲ್ಲಾ ಬೂತ್‍ಗಳಲ್ಲೂ ಇವಿಎಂ, ವಿವಿಪ್ಯಾಟ್
* ಮತ ಖಾತ್ರಿಗೆ 17.4 ಲಕ್ಷ ವಿವಿಪ್ಯಾಟ್‍ಗಳ ಬಳಕೆ
* ಇವಿಎಂಗಳ ರವಾನೆ ವೇಳೆ ಜಿಪಿಎಸ್ ಅಳವಡಿಕೆ
* ಇವಿಎಂಗಳಲ್ಲಿ ಮೊದಲ ಬಾರಿಗೆ ಅಭ್ಯರ್ಥಿಗಳ ಫೋಟೋ
* ಈ ಬಾರಿಯೂ ನೋಟಾ ಇದೆ
* ಮತದಾನಕ್ಕೆ ಮುನ್ನ 48 ಗಂಟೆ ಶಬ್ದಮಾಲೀನ್ಯಕ್ಕೆ ಬ್ರೇಕ್
* ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿವರ್ಧಕಕ್ಕೆ ನಿಷೇಧ
* ಪರಿಸರ ವಿರೋಧಿ ವಸ್ತುಗಳನ್ನು ಪ್ರಚಾರಕ್ಕೆ ಬಳಸುವಂತ್ತಿಲ್ಲ

ಕ್ಯಾಂಡಿಡೇಟ್ ಕಂಟ್ರೋಲ್:
* ಫಾರ್ಮ್ 26 ಸರಿಯಾಗಿ ಭರ್ತಿಯಾಗದಿದ್ದಲ್ಲಿ ನಾಮಪತ್ರ ತಿರಸ್ಕøತ
* ನಿಖರ ಮಾಹಿತಿ ಇಲ್ಲದಿದ್ದಲ್ಲಿ ನಾಮ ಪತ್ರ ತಿರಸ್ಕøತ
* ಅಭ್ಯರ್ಥಿಗಳು ಪ್ಯಾನ್‍ಕಾರ್ಡ್ ಹೊಂದಿರಲೇಬೇಕು
* ಸ್ಥಳೀಯ ಪತ್ರಿಕೆಗಳ್ಲಿ ಅಕ್ರಮ ಮಾಡೋ ಅಭ್ಯರ್ಥಿಗಳ ಭಾವಚಿತ್ರ
* ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾರು ಬೇಕಾದರೂ ಸಿ-ವಿಜಿಲ್ ಆ್ಯಪ್ ಮೂಲಕ ದೂರು ಕೊಡಬಹುದು
* ಮೊಬೈಲ್ ಆಪ್ ಮೂಲಕ ದೂರು ನೀಡಲು ಅವಕಾಶ
* ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ 100 ನಿಮಿಷದ ಒಳಗೆ ಕ್ರಮ
* ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಪ್ರಚಾರಕ್ಕೆ ಬ್ರೇಕ್
* ಮಾಧ್ಯಮಗಳಲ್ಲಿ ಪ್ರಚಾರ ಮಾಡಿದರೆ ಅದರ ಲೆಕ್ಕ ನೀಡಬೇಕು

2014ರ ಚುನಾವಣೆಯ ಸಮಯದಲ್ಲಿ ಮಾರ್ಚ್ 5 ರಂದು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿತ್ತು. 9 ಹಂತದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಚುನಾವಣಾ ಪ್ರಕ್ರಿಯೆ ನಡೆದಿತ್ತು. ಮೊದಲ ಹಂತದ ಮತದಾನ ಏಪ್ರಿಲ್ 7 ರಂದು ನಡೆದಿದ್ದರೆ, ಕೊನೆಯ ಹಂತದ ಚುನಾವಣೆ ಮೇ 12 ರಂದು ನಡೆದಿತ್ತು. ಮಾರ್ಚ್ 16 ರಂದು ಫಲಿತಾಂಶ ಪ್ರಕಟವಾಗಿತ್ತು.

ಏನಿದು ನೀತಿ ಸಂಹಿತೆ?
ಚುನಾವಣಾ ಸಮಯದಲ್ಲಿ ಆಯೋಗ ರಾಜಕೀಯ ಪಕ್ಷಗಳಿಗೆ ಮತ್ತು ಮತದಾರರಿಗೆ ನಡತೆ ಸಂಹಿತೆಯನ್ನು ನೀಡಿ ಕೆಲವು ಮಾರ್ಗಸೂಚಿಯನ್ನು ಕೊಡುತ್ತದೆ. ಈ ನೀತಿ ಸಂಹಿತೆಯನ್ನು ಜನಪ್ರತಿನಿಧಿಗಳು ಉಲ್ಲಂಘಿಸುವಂತಿಲ್ಲ. ನೀತಿ ಸಂಹಿತೆಯನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಬಹುದು.

ನೀತಿ ಸಂಹಿತೆ ಜಾರಿಯಾದ ಬಳಿಕ ಹಾಲಿ ಸರ್ಕಾರ ಯಾವುದೇ ಯೋಜನೆಗಳನ್ನು ಪ್ರಕಟಿಸುವಂತಿಲ್ಲ. ಜನಪ್ರತಿನಿಧಿಗಳು ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ತುರ್ತು ಸಂದರ್ಭ ಹೊರತು ಪಡಿಸಿ ಸರ್ಕಾರದ ಅಧಿಕಾರಿಗಳು ನಡೆಸುವ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಜನ ಸಾಮಾನ್ಯರು ಭಾರೀ ಪ್ರಮಾಣದ ಹಣವನ್ನು ತೆಗೆದುಕೊಂಡು ಹೀಗುವಾಗ ಅದಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳುವುದು ಕಡ್ಡಾಯ. ದಾಖಲೆ ಇಲ್ಲದೇ ಇದ್ದರೆ ಹಣವನ್ನು ವಶಕ್ಕೆ ಪಡೆಯಲಾಗುತ್ತದೆ.

ಸರ್ಕಾರಿ ಅಧಿಕಾರಿಗಳು ರಾಜಕೀಯ ನಾಯಕರ ಜೊತೆ ಗುರುತಿಸಿಕೊಳ್ಳುವಂತಿಲ್ಲ. ತನ್ನ ಪರವಾಗಿ ಕೆಲಸ ಮಾಡುವ ಅಧಿಕಾರಿಯನ್ನು ತನ್ನ ಕ್ಷೇತ್ರಕ್ಕೆ ವರ್ಗಾವಣೆ ಮಾಡುವಂತಿಲ್ಲ. ತುರ್ತು, ಅನಿವಾರ್ಯ ಸಂದರ್ಭದಲ್ಲಿ ಆಯೋಗದ ಅನುಮತಿ ಪಡೆದು ಅಧಿಕಾರಿಯನ್ನು ವರ್ಗಾವಣೆ ಮಾಡಬಹುದು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *