ಚುನಾವಣೆಯಲ್ಲಿ ಸೋತ ಸರ್ಕಾರದ ಟಾಪ್ ಮಂತ್ರಿಗಳು

Public TV
1 Min Read

ಬೆಂಗಳೂರು: ಈ ಬಾರಿ ನಾವೇ ಅಧಿಕಾರಕ್ಕೆ ಏರುತ್ತೇವೆ ಎಂದು ಹೇಳಿದ್ದ ಘಟಾನುಘಟಿ ಕೈ ನಾಯಕರು ಈ ಚುನಾವಣೆಯಲ್ಲಿ ಸೋತಿದ್ದಾರೆ.

ದೇವೇಗೌಡರ ವಿರೋಧ ಕಟ್ಟಿಕೊಂಡು ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಸೋತರೆ ಬದಾಮಿಯಲ್ಲಿ ಗೆದ್ದಿದ್ದಾರೆ. ಲಿಂಗಾಯತ ಧರ್ಮದ ಪರ ಹೋರಾಟ ನಡೆಸಿದ ಪ್ರಮುಖ ಸಚಿವರ ಪೈಕಿ ಶರಣ ಪ್ರಕಾಶ್ ಪಾಟೀಲ್, ವಿನಯ್ ಕುಲಕರ್ಣಿ, ಬಸವರಾಜ ರಾಯರೆಡ್ಡಿ ಸೋತಿದ್ದಾರೆ.

ಕರಾವಳಿಯ ಬಿಜೆಪಿಯ ಹಿಂದುತ್ವದ ಅಲೆಯಿಂದಾಗಿ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್ ಸೋತಿದ್ದಾರೆ. ಗುಂಡ್ಲುಪೇಟೆಯಲ್ಲಿ ಗೀತಾ ಮಹಾದೇವ ಪ್ರಸಾದ್, ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ ಸೋತಿದ್ದಾರೆ.

ಎಸ್‍ಎಸ್ ಮಲ್ಲಿಕಾರ್ಜುನ, ಎಚ್.ಸಿ ಮಹಾದೇವಪ್ಪ, ಸಂತೋಷ್ ಲಾಡ್, ರುದ್ರಪ್ಪ ಲಮಾಣಿ, ಉಮಾಶ್ರೀ ಸೋತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *